ಅಪಘಾತ ಪ್ರಕರಣ
- ಉಡುಪಿ: ದಿನಾಂಕ 18/12/2014 ರಂದು ಪಿರ್ಯಾದಿದಾರರಾದ ಚೇತನ್ ಕುಮಾರ (28) ತಂದೆ ಸಂಜೀವ ಪೂಜಾರಿ ವಾಸ: ನಿಸರ್ಗ ನಿಲಯ ಮಠದಬೆಟ್ಟು, ಉಡುಪಿ ತಾಲೂಕು ಎಂಬವರು ಮಣಿಪಾಲ ಪ್ರೇಸ್ನಲ್ಲಿ ಕೆಲಸ ಮುಗಿಸಿಕೊಂಡು ಕೆಎ 20. ಯು 8900 ನೇ ಮೋಟಾರ್ ಸೈಕಲ್ ನಲ್ಲಿ ಉಡುಪಿಯಲ್ಲಿರುವ ತನ್ನ ಮನೆಗೆ ತೆರಳುವಾಗ ಕಲ್ಸಂಕ ಮಾರ್ಗವಾಗಿ ಬೃಂದಾವನ ಜಂಕ್ಷನ್ ಬಳಿ ತಲುಪಿದಾಗ ರಾತ್ರಿ 07:30 ಗಂಟೆಗೆ ಪಿರ್ಯಾದಿದಾರರ ಹಿಂದಿನಿಂದ ಒಬ್ಬಾತ ಮೋಟಾರ್ ಸೈಕಲ್ ಸವಾರ ತನ್ನ ಮೋಟಾರ್ ಸೈಕಲ್ನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಎಡಬದಿಯಲ್ಲಿ ತೆರಳುತ್ತಿದ್ದ ಪಿರ್ಯಾದಿದಾರರ ಮೋಟಾರ್ ಸೈಕಲ್ನ ಬಲಭಾಗಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ಅವರ ಬಲಕಾಲಿನ ಪಾದದ ಬಳಿ ಒಳ ಜಖಂ ಆಗಿದ್ದು, ಆರೋಪಿಯು ಮೋಟಾರ್ ಸೈಕಲ್ನ್ನು ನಿಧಾನಿಸಿ ನಂತ್ರ ನಿಲ್ಲಿಸದೇ ಪರಾರಿಯಾಗಿರುತ್ತಾನೆ. ಪಿರ್ಯಾದಿದಾರರ ಮೋಟಾರ್ ಸೈಕಲ್ಗೆ ಡಿಕ್ಕಿ ಹೊಡೆದ ಮೋಟಾರ್ ಸೈಕಲ್ ನಂಬ್ರ ಕೆಎ 20 ಇಇ 1995 ನೇ ಹೋಂಡಾ ಸಿಬಿಆರ್ ಎಂಬುದಾಗಿರುತ್ತದೆ, ಪಿರ್ಯಾದಿದಾರರು ಉಡುಪಿಯ ಗಾಂಧಿ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಾಗಿರುವುದಾಗಿದೆ ಎಂಬುದಾಗಿ ಚೇತನ್ ಕುಮಾರ ರವರು ನೀಡಿದ ದೂರಿನಂತೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 126/2014 ಕಲಂ 279, 337 ಐ.ಪಿ.ಸಿ & 134(ಎ)(ಬಿ)ಐಎಮ್ವಿ ಕಾಯ್ದೆ ಯಂತೆ ಪ್ರಕರಣ ದಾಖಲಿಸಲಾಗಿದೆ.
No comments:
Post a Comment