ಹಲ್ಲೆ
ಪ್ರಕರಣ
- ಕಾರ್ಕಳ: ಪಿರ್ಯಾದಿ ಕೆ ಅಶೋಕ್ ನಾಯಕ್ ಇವರ ಮಗಳ ಹುಟ್ಟುಹಬ್ಬವನ್ನು ತನ್ನ ಕುಟುಂಬ ಸದಸ್ಯರೊಂದಿಗೆ ದಿನಾಂಕ 14/12/2014 ರಂದು ತನ್ನ ಮನೆಯಲ್ಲಿ ಆಚರಿಸಿದ್ದು, ಈ ಕಾರ್ಯಕ್ರಮದಲ್ಲಿ ಪಿರ್ಯಾದಿದಾರರ ಮಾವ, ಅತ್ತೆ, ಹಾಗೂ ಭಾವನವರು ಭಾಗವಹಿಸಿ ತೆರಳಿರುತ್ತಾರೆ. ದಿನಾಂಕ 15/12/2014 ರಂದು 13:30 ಗಂಟೆಗೆ ಪಿರ್ಯಾದಿದಾರರ ಮಾವ ಕಮಾಲಾಕ್ಷ ಕಿಣಿ, ಅತ್ತೆ ಶ್ರೀಮತಿ ಪುಷ್ಪಾ ಕಿಣಿ ಹಾಗೂ ಭಾವ ಮಂಜುನಾಥ ಕಿಣಿ ಇವರು ಪಿರ್ಯಾದಿದಾರರ ಮನೆಗೆ ಅಕ್ರಮ ಪ್ರವೇಶ ಮಾಡಿ, ಪಿರ್ಯಾದಿದಾರರನ್ನು ಉದ್ದೇಶಿಸಿ ಅವ್ಯಾಚ ಶಬ್ದಗಳಿಂದ ಬೈದು ಪಿರ್ಯಾದಿದಾರರ ತಾಯಿಯನ್ನು ದೂಡಿದ್ದು, ತಡೆಯಲು ಬಂದ ಪಿರ್ಯಾದಿದಾರರ ತಂದೆಗೆ ಮಂಜುನಾಥ ಕಿಣಿ ಕಲ್ಲಿನಿಂದ ಹಣೆಗೆ ಹೊಡೆದು ಗಾಯಗೊಳಿಸಿದ್ದಲ್ಲದೇ, ಕಮಾಲಾಕ್ಷ ಕಿಣಿ ಮತ್ತು ಶ್ರೀಮತಿ ಪುಷ್ಪಾ ಕಿಣಿಯವರು ಪಿರ್ಯಾದಿದಾರರ ತಾಯಿಯನ್ನು ನೆಲಕ್ಕೆ ದೂಡಿ ಹಾಕಿ ಕಾಲಿನಿಂದ ತುಳಿದು ಗಾಯಗೊಳಿಸಿರುತ್ತಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 205/14 ಕಲಂ 448, 504, 341, 324, 506 R/w 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
ಕೊಲೆ
ಪ್ರಕರಣ
- ಪಡುಬಿದ್ರಿ: ಕರಿಯ ದೇವಾಡಿಗ ಇವರ ಮಗಳಾದ ತಾರಾವತಿ (40) ರವರ ಗಂಡ ರಾಜು ಎಂಬವರು ಸುಮಾರು ಒಂದೂವರೆ ವರ್ಷದ ಹಿಂದೆ ಮೃತಪಟ್ಟಿದ್ದು , ನಂತರ ತಾರಾವತಿ ರವರು ಅವರ ಮಕ್ಕಳೊಂದಿಗೆ ತವರು ಮನೆಯಾದ ಪಡುಬಿದ್ರಿ ಕೆಂಬೆಟ್ಟು ಎಂಬಲ್ಲಿ ತಂದೆ ತಾಯಿ ರವರ ಜೊತೆ ವಾಸ ಮಾಡಿಕೊಂಡಿರುತ್ತಾರೆ. ಪಡುಬಿದ್ರಿ ಕೇರಿ ನಿವಾಸಿ ನವೀನ ಎಂಬವರ ಪರಿಚಯ ತಾರಾವತಿಗೆ ವಿದ್ದು ಮದುವೆಯಾಗುವ ಬಗ್ಗೆ ನವೀನನು ಹೇಳುತ್ತಿದ್ದು ಇದಕ್ಕೆ ಯಾವುದೇ ಉತ್ತರ ನೀಡಿರುವುದಿಲ್ಲಿ ಹೀಗಿರುತ್ತಾ ದಿನಾಂಕ 16.12.2014 ರಂದು 19.30 ಗಂಟೆಯಿಂದ ದಿನಾಂಕ 7.12.2014 ರಂದು 11.00 ಗಂಟೆಯ ಮದ್ಯಾವಧಿಯಲ್ಲಿ ನವೀನನು ತಾರಾವತಿಯನ್ನು ಪಡುಬಿದ್ರಿಯ ದೂಜ ಪೂಜಾರಿಯ ಅಂಗಡಿ ಹಿಂಬದಿ ಕರೆದುಕೊಂಡು ಹೋಗಿ ಯಾವುದೋ ಕಾರಣಕ್ಕೆ ಆಕೆಯ ಮೇಲೆ ದ್ವೇಷವುಂಟಾಗಿ ಆಕೆಯ ಕುತ್ತಿಗೆಯನ್ನು ಚೂರಿಯಿಂದ ಕೊಯ್ದು ಕೊಲೆ ಮಾಡಿ ನಂತರ ಆತನು ಅಲ್ಲಿಯೇ ಪಕ್ಕದಲ್ಲಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 132/2014 ಕಲಂ: 302 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
No comments:
Post a Comment