Sunday, November 23, 2014

Daily Crime Reports as on 23/11/2014 at 07:00 Hrs

    ಅಸ್ವಾಭಾವಿಕ ಮರಣ ಪ್ರಕರಣ
    • ಮಲ್ಪೆ: ಫಿರ್ಯಾದಿದಾರರಾದ ವೆಂಕಟರಮಣ ನಾಯ್ಕ ತಂದೆ ಹೆರಿಯ ನಾಯ್ಕ ವಾಸ ಬಣಸಾಲಿ ಮನೆ ಹಡ್ಡೀನ ಗ್ರಾಮ ಭಟ್ಕಳ ತಾಲೂಕು ಎಂಬವರ ಅತ್ತಿಗೆಯ ಮಗನಾದ ಸುಮಾರು 26 ವರ್ಷ ಪ್ರಾಯದ ಗಣೇಶ ಎಂ ನಾಯ್ಕ ಎಂಬುವನು ಮಲ್ಪೆಯಲ್ಲಿ ಸಂಜನಾ ಬೋಟ್‌ನಲ್ಲಿ ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದು ದಿನಾಂಕ 13/11/14 ರಂದು ಬೋಟ್‌ನಲ್ಲಿ ಮೀನುಗಾರಿಕಾ ಕೆಲಸ ಮಾಡಿಕೊಂಡಿರುವಾಗ ಕಾಲು ಜಾರಿ ಬೋಟ್‌ನ ಒಳಗಡೆ ಬಿದ್ದಿದ್ದು ಬಲಗಣ್ಣಿನ ರೆಪ್ಪೆಯ ಮೇಲೆ ರಕ್ತಗಾಯವಾಗಿದ್ದು ಅಲ್ಲದೇ ಹೊಟ್ಟೆಗೆ ಗುದ್ದಿದ ಗಾಯವಾಗಿರುತ್ತದೆ. ಕೂಡಲೇ ಆತನನ್ನು ಚಿಕಿತ್ಸೆಯ ಬಗ್ಗೆ ಉಡುಪಿ ಆದರ್ಶ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಿದ್ದು, ನಂತರ ಹೆಚ್ಚಿನ ಚಿಕಿತ್ಸೆಯ ಬಗ್ಗೆ ದಿನಾಂಕ 21/11/14 ರಂದು ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ದಾಖಲು ಮಾಡಿದ್ದು ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 22/11/14 ರಂದು ಬೆಳಿಗಿನ ಜಾವ 01:30 ಗಂಟೆಗೆ ಮೃತ ಪಟ್ಟಿರುವುದಾಗಿದೆ ಎಂಬುದಾಗಿ ವೆಂಕಟರಮಣ ನಾಯ್ಕ ರವರು ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 53/2014 ಕಲಂ 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

    No comments: