ಅಪಘಾತ
ಪ್ರಕರಣ
- ದಿನಾಂಕ 05-10-2014 ರಂದು 18:20 ಗಂಟೆಗೆ ಪಿರ್ಯಾದಿ ಮಹಮ್ಮದ್ ಶಫಿ ಇವರು ತನ್ನ ಕಾರು ನಂಬ್ರ ಕೆಎ-19-ಎಂ.ಸಿ -5834 ನೇ ದನ್ನು ಸುರತ್ಕಲ್ ನಿಂದ ಉಡುಪಿ ಕಡೆಗೆ ರಾ.ಹೇ 66 ರಲ್ಲಿ ಚಲಾಯಿಸಿಕೊಂಡು ಉಡುಪಿ ತಾಲೂಕು ಪಾಂಗಳ ಗ್ರಾಮದ ಪಾಂಗಳ ಸೇತುವೆ ಬಳಿ ತಲುಪುವಾಗ ಹಿಂದಿನಿಂದ ಕೆಎ-19-ಸಿ-4529 ನೇ ಬಸ್ಸನ್ನು ಅದರ ಚಾಲಕನು ಅಡ್ಡಾದಿಡ್ಡಿಯಾಗಿ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಕಾರಿನ ಹಿಂಬದಿಗೆ ಡಿಕ್ಕಿಹೊಡೆದ ಪರಿಣಾಮ ಪಿರ್ಯಾದಿದಾರರ ಕಾರಿನ ಹತೋಟಿ ತಪ್ಪಿ ಎದುರಿನಿಂದ ಬರುತ್ತಿದ್ದ ಹೊಸ Hyundai ಕಾರಿಗೆ ಪಿರ್ಯಾದಿದಾರರ ಕಾರು ತಾಗಿದ ಪರಿಣಾಮ Hyundai ಕಾರಿನ ಎದುರು ಭಾಗ ಜಖಂಗೊಂಡಿರುತ್ತದೆ ಹಾಗೂ ಪಿರ್ಯಾದಿದಾರರ ಕಾರಿನ ಹಿಂಬದಿ ಹಾಗೂ ಎದುರು ಬದಿ ಜಖಂಗೊಂಡಿರುತ್ತದೆ. ಈ ಬಗ್ಗೆ ಕಾಪು ಠಾಣಾ ಅಪರಾಧ ಕ್ರಮಾಂಕ: 197/2014 ಕಲಂ 279 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
ಅಸ್ವಾಭಾವಿಕ ಮರಣ ಪ್ರಕರಣ
- ಉಡುಪಿ: ಯು ಕೇಶವ ನಾಯ್ಕ್ ಇವರು ಅಗಾಗ ಅನಾರೋಗಕ್ಕೆ ಒಳಗಾಗುತ್ತಿದ್ದು ದಿನಾಂಕ: 05/10/2014ರಂದು ಮದ್ಯಾಹ್ನ ಸುಮಾರು 1 ಗಂಟೆಯ ಸಮಯಕ್ಕೆ ನಿತ್ರಾಣಗೊಂಡವರನ್ನು ಚಿಕಿತ್ಸೆಯ ಬಗ್ಗೆ ಅಸ್ಪತ್ರೆಗೆ ಕರೆದು ಕೊಂಡು ಹೋದಾಗ ಅಲ್ಲಿನ ವೈದ್ಯರು ಪರೀಕ್ಷಿಸಿ ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಉಡುಪಿ ನಗರ ಠಾಣಾ ಅಸ್ವಾಭಾವಿಕ ಮರಣ ಪ್ರಕರಣ ಕ್ರಮಾಂಕ 61/14 ಕಲಂ 174 ಸಿಆರ್ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
No comments:
Post a Comment