ಅಸ್ವಾಭಾವಿಕ ಮರಣ ಪ್ರಕರಣ
- ಮಣಿಪಾಲ:ಪಿರ್ಯಾದಿದಾರರಾದ ಮಂಜುನಾಥ ಶೆಟ್ಟಿ (44), ತಂದೆ:ಭಾಸ್ಕರ ಶೆಟ್ಟಿ, ವಾಸ:ಎಂಐಜಿ-104, ಹುಡ್ಕೋ ಕಾಲೋನಿ, ಮಣಿಪಾಲರವರ ಜೊತೆಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಅಪ್ಪು ಅಮೀನ್ (54) ಎಂಬವರು ವಿಪರೀತ ಅಮಲು ಪದಾರ್ಥ ಸೇವಿಸುವ ಅಭ್ಯಾಸ ಹೊಂದಿದವರಾಗಿದ್ದು, ಈ ದಿನ ದಿನಾಂಕ:26/10/14 ರಂದು ಬೆಳಿಗ್ಗೆ 7:30 ಗಂಟೆಗೆ ದಶರಥ ನಗರದ ರವೀಂದ್ರ ಪ್ರಭುರವರ ಅಂಗಡಿಯಲ್ಲಿ ಅಸ್ವಸ್ಥಗೊಂಡು ಬಿದ್ದವರನ್ನು ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ಕರೆತಂದು ಪರೀಕ್ಷಿಸಿದಲ್ಲಿ ವೈದ್ಯಾಧಿಕಾರಿಯವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.ಈ ಬಗ್ಗೆ ಮಂಜುನಾಥ ಶೆಟ್ಟಿರವರು ನೀಡಿದ ದೂರಿನಂತೆ ಮಣಿಪಾಲ ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 35/2014, ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
No comments:
Post a Comment