Sunday, October 12, 2014

Daily Crimes Reported as On 12/10/2014 at 19:30 Hrs


ಇತರ ಪ್ರಕರಣ
  • ಉಡುಪಿ ನಗರ:ಆಪಾದಿತ ಪರಮೇಶ್ವರನ ವಿರುದ್ಧ ದಿನಾಂಕ:25/05/2005 ರಂದು 18:00 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಶೇಖರ ನಿಟ್ಟೂರು, (40) ತಂದೆ:ದಿವಂಗತ ಚಂದ್ರ, ವಾಸ:ವಿಷ್ಣುಮೂರ್ತಿ ದೇವಸ್ಥಾನದ ಹತ್ತಿರ, ನಿಟ್ಟೂರು, ಉಡುಪಿ ತಾಲೂಕುರವರು ನೀಡಿದ ಲಿಖಿತ ದೂರಿನಂತೆ ಉಡುಪಿ ನಗರ ಠಾಣಾ ಅಪರಾಧ ಕ್ರಮಾಂಕ 228/2005 ಕಲಂ 406,420 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು ಆಪಾದಿತನ ವಿರುದ್ಧ ತಲೆಮರೆಸಿಕೊಂಡ ಆರೋಪಿ ಎಂಬುದಾಗಿ ದಿನಾಂಕ:12/08/2005 ರಂದು ಮಾನ್ಯ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದು ಸಿಸಿ ನಂಬ್ರ 11/06 ರಂತೆ ವಿಚಾರಣೆಯಲ್ಲಿರುತ್ತದೆ. ಅಪಾದಿತನ ವಿರುದ್ಧ ಮಾನ್ಯ ನ್ಯಾಯಾಲಯ ಸಮನ್ಸ್ ಹೊರಡಿಸಿದ್ದು ಸಮನ್ಸ್‌ಗೆ ಹಾಗೂ ವಾರಂಟಿಗೆ ಸಹಾ ಹಾಜರಾಗಿರುವುದಿಲ್ಲ .ಅಪಾದಿತನು ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದ ಕಾರಣ ದಿನಾಂಕ 18/10/2006 ರಂದು ಉದ್ಘೋಷಣೆ ಹೊರಡಿಸಿದ್ದು, ಉದ್ಘೋಷಣೆ ಹೊರಡಿಸಿದರು  ಹಾಜರಾಗಿರುವುದಿಲ್ಲ. ದಿನಾಂಕ:23/06/2008 ರಂದು ಎಲ್‌ಪಿಸಿ 03/07 ರಂತೆ ವಾರಂಟು ಹೊರಡಿಸಿರುತ್ತದೆ.ನಂತರ ಸದ್ರಿ ಆರೋಪಿಯ ಪತ್ತೆಯ ಬಗ್ಗೆ ಸಿಬ್ಬಂದಿಗಳನ್ನು ನೇಮಿಸಿ ಪ್ರಯತ್ನಿಸಿದ್ದು ಪತ್ತೆಯಾಗಿರುವುದಿಲ್ಲ. ದಿನಾಂಕ 11/10/2014 ರಂದು ಸದ್ರಿ ಎಲ್‌ಪಿಸಿ ಅಸಾಮಿಯ ಪತ್ತೆಗೆ ಸಿಬ್ಬಂದಿಗಳಾದ ಪ್ರಸನ್ನ ಮತ್ತು ನಾಗರಾಜ ಇವರನ್ನು ವಿಶೇಷ ಕರ್ತವ್ಯದಲ್ಲಿ ನೇಮಿಸಿ ಕಳುಹಿಸಿದ್ದು ದಿನಾಂಕ:11/10/2014 ರಂದು ಚಿಕ್ಕಮಗಳೂರು ಜಿಲ್ಲೆಯ  ಗೋಣೀಬೀಡು ಠಾಣಾ ಸರಹದ್ದಿನ ಮಣಿಕೆರೆ ಎಂಬಲ್ಲಿ ಆರೋಪಿಯನ್ನು ವಶಕ್ಕೆ ಪಡೆದುಕೊಂಡು ಪಿರ್ಯಾದಿದಾರರಾದ ಉಡುಪಿ ನಗರ ಪೊಲೀಸ್ ಠಾಣಾ ಉಪನಿರೀಕ್ಷಕರಾದ ಮಧು ಟಿ.ಎಸ್‌ರವರು ಠಾಣಾ ಅಪರಾಧ ಕ್ರಮಾಂಕ 289/14 ಕಲಂ 174 (ಎ) ಐಪಿಸಿಯಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

No comments: