ಅಪಘಾತ ಪ್ರಕರಣ
- ಕೊಲ್ಲೂರು: ದಿನಾಂಕ 26/10/2014 ರಂದು ಬೆಳಿಗ್ಗೆ 07:30 ಗಂಟೆಗೆ ಪಿರ್ಯಾದಿದಾರರಾದ ಜೋಸೆಫ್ (35) ತಂದೆ ಕೆ. ವಿ ಥೋಮಸ್ ವಾಸ ಕುಯವೆಲಿಲ್, ಜಡ್ಕಲ್ ಗ್ರಾಮ, ಕುಂದಾಪುರ ತಾಲೂಕು ಎಂಬವರ ಅಜ್ಜಿ ತ್ರೇಸಿಯಮ್ಮ (75) ರವರು ಜಡ್ಕಲ್ ಚರ್ಚ್ ಗೆ ಪೂಜೆಗೆ ಮನೆಯಿಂದ ನಡೆದುಕೊಂಡು ಹೋಗುವಾಗ ಜಡ್ಕಲ್ ಕಡೆಯಿಂದ ಮುದೂರು ಕಡೆಗೆ ಕೆ ಎ 20 ಇ ಬಿ 9542 ನೇ ಬುಲೆಟ್ ಬೈಕಿನ ಚಾಲಕ ತನ್ನ ಬೈಕನ್ನು ಅತೀ ವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದು ತ್ರೇಸಿಯಮ್ಮನಿಗೆ ಡಿಕ್ಕಿ ಹೊಡೆದ ಪರಿಣಾಮ ಅವರು ರಸ್ತೆಗೆ ಬಿದ್ದು, ಅವರ ಬಲಕಾಲಿಗೆ ಮತ್ತು ತಲೆಗೆ ರಕ್ತಗಾಯವಾಗಿರುತ್ತದೆ ಎಂಬುದಾಗಿ ಜೋಸೆಫ್ ರವರು ನೀಡಿದ ದೂರಿನಂತೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 69/2014 ಕಲಂ 279, 337 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಲಾಗಿದೆ.
No comments:
Post a Comment