ಹುಡುಗ ಕಾಣೆ ಪ್ರಕರಣ
- ಅಮಾಸೆಬೈಲು: ಪಿರ್ಯದಿದಾರರಾದ ರಮೇಶ ಕುಲಾಲ (41) ತಂದೆ ಲಕ್ಷ್ಮಣ ಕುಲಾಲ ವಾಸ; ಅರಸ್ಮಕಾನ್ ಶೇಡಿಮನೆ ಕುದ್ರ ಬೀಡು ಶೇಡಿಮನೆ ಗ್ರಾಮ ಕುಂದಾಪುರ ತಾಲೂಕು ಎಂಬವರ ಮಗ ಸುದರ್ಶನ ಪ್ರಾಯ 15 ವರ್ಷ ಎಂಬುವನು ದಿನಾಂಕ 24/10/2014 ರಂದು 09:00 ಗಂಟೆಗೆ ಗೋಳಿಯಂಗಡಿಗೆ ಬಟ್ಟೆ ತರಲು ಹೋದವನು ಈ ತನಕ ಮನಗೆ ಬಾರದೇ ಕಾಣೆಯಾಗಿರುತ್ತಾನೆ. ಕಾಣೆಯಾದವನು ಸುಮಾರು 5.1 ಅಡಿ ಎತ್ತರ ವಿದ್ದು, ಕಪ್ಪು ಬಿಳಿ ಚೌಕುಳಿ ಪುಲ್ ಕೈ ಶರ್ಟ್ ಹಾಗೂ ಸಿಮೆಂಟ್ ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ ಮುಖದಲ್ಲಿ ಬಿಳಿ ಚಿಕ್ಕ ಕಲೆ ಇರುತ್ತದೆ ಎಂಬುದಾಗಿ ರಮೇಶ ಕುಲಾಲ ರವರು ನೀಡಿದ ದೂರಿನಂತೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 41/2014 ಕಲಂ 363 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣ
- ಗಂಗೊಳ್ಳಿ: ದಿನಾಂಕ 04/10/2014 ರಂದು ಬೆಳಿಗ್ಗೆ 09:35 ಗಂಟೆಗೆ ಪಿರ್ಯಾದಿದಾರರಾದ ತಿಮ್ಮ ದೇವಾಡಿಗ (52) ತಂದೆ: ದಿ.ವೆಂಕಟ ದೇವಾಡಿಗ ವಾಸ: ಮೇಲ್ಮನೆ ಮರವಂತೆ ಗ್ರಾಮ ಎಂಬವರ ತಾಯಿ ಚಂದು ದೇವಾಡ್ತಿ (65) ರವರಿಗೆ ಗದ್ದೆಯಲ್ಲಿರುವಾಗ ಬೀದಿ ಹುಚ್ಚು ನಾಯಿ ತಲೆಗೆ ಕಿವಿಗೆ ಮುಖಕ್ಕೆ ಎದೆಗೆ ಕುತ್ತಿಗೆಗೆ ಕಚ್ಚಿದ್ದು ಚಿಕಿತ್ದೆಯ ಬಗ್ಗೆ ಮಂಗಳೂರು ವೆನ್ ಲಾಕ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಪಡೆಯುತ್ತಿದ್ದು ದಿನಾಂಕ 25.10.2014 ರಂದು ಬೆಳಿಗ್ಗೆ 09:45 ಗಂಟೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿರುವುದಾಗಿದೆ ಎಂಬುದಾಗಿ ತಿಮ್ಮ ದೇವಾಡಿಗ ರವರು ನೀಡಿದ ದೂರಿನಂತೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 23/2014 ಕಲಂ 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಲಾಗಿದೆ.
No comments:
Post a Comment