Thursday, October 16, 2014

Daily Crime Reports as on 16/10/2014 at 19:30 Hrs

ಅಪಘಾತ ಪ್ರಕರಣ
  • ಬ್ರಹ್ಮಾವರ: ದಿನಾಂಕ 16/10/2014 ರಂದು ಮಧ್ಯಾಹ್ನ 2:00 ಗಂಟೆಗೆ ಉಡುಪಿ ತಾಲೂಕು ಹೇರೂರು ಗ್ರಾಮದ ಹೇರೂರು ಸುಪ್ರೀಂ ಫೀಡ್ಸ್‌ ನ ಎದುರು ಲಾರಿ ನಂಬ್ರ ಕೆಎ 20 4183 ನ್ನು ಅದರ ಚಾಲಕ ಶಾಹಿಲ್ ಎಂಬಾತನು ಲಾರಿಯನ್ನು ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ ವಿದ್ಯುತ್‌ ಕಂಬಕ್ಕೆ ಢಿಕ್ಕಿ ಹೊಡೆದು ಮೆಸ್ಕಾಂ ಇಲಾಖೆಗೆ ರೂಪಾಯಿ 29,707.91  ನಷ್ಟ ಉಂಟಾಗಿದ್ದು, ಲಾರಿಯಲ್ಲಿದ್ದ ಸೊತ್ತುಗಳಿಗೆ  ಹಾನಿಯಾಗಿರುತ್ತದೆ ಎಂಬುದಾಗಿ ಕಮಲಾಕ್ಷ ಹೆಚ್, ಶಾಖಾಧಿಕಾರಿ ಮೆಸ್ಕಾಂ ಶಾಖೆ, ಬ್ರಹ್ಮಾವರ ರವರು ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 193/2014 ಕಲಂ 279 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: