Thursday, October 02, 2014

Daily Crime Reports as on 02/10/2014 at 07:00 Hrs

ಅಪಘಾತ ಪ್ರಕರಣ
  • ಕೋಟ: ದಿನಾಂಕ 30-09-2014 ರಂದು ಮಧ್ಯಾಹ್ನ 1:30 ಗಂಟೆಗೆ ಪಿರ್ಯಾದಿದಾರರಾದ ಸಾಜಿದಾ (34)  ಗಂಡ: ಉಮ್ಮರ್ ಬಿ.ಕೆ ವಾಸ:ರಾಮಮಂದಿರದ ಬಳಿ ಕೋಟತಟ್ಟು ಪಡುಕೆರೆ ಕೋಟತಟ್ಟು ಗ್ರಾಮ ಉಡುಪಿ ತಾಲೂಕು ಎಂಬವರು ತನ್ನ ತಮ್ಮ ಇಮ್ತಿಯಾಜ್ ಕೆ..20 .ಎಫ್.2392 ನೇ ನಂಬ್ರದ ಮೋಟಾರು ಸೈಕಲ್ನಲ್ಲಿ ತನ್ನ ಒಂದು ವರ್ಷದ ಮಗ ರಾಹೀಶನೊಂದಿಗೆ ಹಿಂಬದಿ ಸವಾರಳಾಗಿ ಕುಳಿತು ಕೊಂಡು ಬ್ರಹ್ಮಾವರ ಕಡೆಯಿಂದ ಕೋಟ ಕಡೆಗೆ ಹೋಗುವಾಗ, ಉಡುಪಿ ತಾಲೂಕು ಐರೋಡಿ ಗ್ರಾಮದ ಮಾಬುಕಳ ಸೇತುವೆ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಹೋಗುತ್ತಿರುವಾಗ ಪಿರ್ಯಾಧಿದಾರರ ಮುಂದೆ ಹೋಗುತ್ತಿದ್ದ, ಕೆ. 20.ಸಿ:9351 ನೇ ನೇ ನಂಬ್ರದ ಟಾಟಾ ಏಸ್ ಗಾಡಿಯನ್ನು ಅದರ ಚಾಲಕ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ, ಯಾವುದೇ ಮುನ್ಸೂಚನೆ ನೀಡದೆ ಒಮ್ಮೆಲೇ ಬ್ರೇಕ್ ಹಾಕಿದ ಪರಿಣಾಮ ಸದ್ರಿ ಗೂಡ್ಸ್ ವಾಹನದಲ್ಲಿ ಕೊಂಡು ಹೋಗುತ್ತಿದ್ದ ತಗಡಿನ ಶೀಟುಗಳು ಜಾರಿ ಪಿರ್ಯಾಧಿದಾರರ ಸಹಸವಾರಳಾಗಿ ಪ್ರಯಾಣಿಸುತ್ತಿದ್ದ ಮೋಟಾರ್ ಸೈಕಲ್ ಮೇಲೆ ಬಿದ್ದ ಪರಿಣಾಮ ಪಿರ್ಯಾಧಿದಾರಳು, ಇಮ್ತಿಯಾಜ್, ಹಾಗೂ ಮಗು ರಾಹೀಶ್ ಮೋಟಾರ್ ಸೈಕಲ್ ಸಮೇತ ರಸ್ತೆಯ ಮೇಲೆ ಬಿದ್ದ ಪರಿಣಾಮ ಪಿರ್ಯಾಧಿದಾರರಿಗೆ ಹಾಗೂ ಅವರ ಮಗ ರಾಹೀಶ್ ನಿಗೆ ರಕ್ತಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಮಣಿಪಾಲಕೆ.ಕೆ.ಎಂ.ಸಿ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ ಎಂಬುದಾಗಿ ಸಾಜಿದಾ ರವರು ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 200/2014 ಕಲಂ 279, 337 ಐ.ಪಿ.ಸಿ ಮತ್ತು 134(ಎ),(ಬಿ) ಮೋಟಾರು ವಾಹನ ಕಾಯ್ದೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: