Wednesday, October 01, 2014

Daily Crime Reports as on 01/10/2014 at 07:00 Hrs

ಕೊಲೆ ಪ್ರಕರಣ
  • ಬ್ರಹ್ಮಾವರ: ಪಿರ್ಯಾದಿದಾರರಾದ ಪ್ರಸನ್ನಿ (26) ಗಂಡ ಮಾಧವ ವಾಸ: ಕನ್ನಾರು ದುರ್ಗಾಪರಮೇಶ್ವರಿ  ದೇವಸ್ಥಾನದ ಹತ್ತಿರ ಕನ್ನಾರು ಚೇರ್ಕಾಡಿ ಗ್ರಾಮ ಎಂಬವರ ತಂದೆ ವಾಸು ನಾಯ್ಕ (75) ರವರು  ತನ್ನ ಮಗ ಪ್ರಕಾಶನೊಂದಿಗೆ ವಾಸವಾಗಿದ್ದು ವಾಸು ನಾಯ್ಕ ರವರಿಗೆ ಸ್ವಲ್ಪ ಪಾರ್ಶುವಾಯು ಆಗಿ ಸರಿಯಾಗಿ ತಿರುಗಾಡಲು ಆಗದ ಕಾರಣ  ಅವರ ಆರೈಕೆ ಮಾಡಲಾಗದೇ ಅವರನ್ನು ಕೊಲೆ ಮಾಡುವ ಉದ್ದೇಶದಿಂದ  ಆರೋಪಿ ಪ್ರಕಾಶ ನು ದಿನಾಂಕ 21/09/2014 ರಂದು ರಾತ್ರಿ 10:30 ಗಂಟೆಗೆ ಉಡುಪಿ ತಾಲೂಕು ಚೇರ್ಕಾಡಿ ಗ್ರಾಮದ ಕನ್ನಾರು ಕೋಡಿ ಎಂಬಲ್ಲಿರುವ ವಾಸದ ಮನೆಯಲ್ಲಿ ವಾಸು ನಾಯ್ಕ ರವರಿಗೆ ಹೊಡೆದು, ದೂಡಿ, ಕೊಲೆ ಮಾಡಿದ್ದು ಕೊಲೆಯನ್ನು ಮುಚ್ಚಿ ಹಾಕುವ ಉದ್ದೇಶದಿಂದ ದಿನಾಂಕ 22/09/2014 ರಂದು ಮನೆಯ ಸಮೀಪದ ದರ್ಖಾಸಿನಲ್ಲಿ ಶವವನ್ನು ದಫನ ಮಾಡಿರುತ್ತಾನೆ ಎಂಬುದಾಗಿ ಪ್ರಸನ್ನಿ ರವರು ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 183/2014 ಕಲಂ 302, 201 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಹಲ್ಲೆ ಪ್ರಕರಣ
  • ಕಾರ್ಕಳ:  ದಿನಾಂಕ 27/09/2014 ರಂದು ರಾತ್ರಿ 8:30 ಗಂಟೆಗೆ ಫಿರ್ಯಾಧಿದಾರರಾದ ಸುರೇಶ (25) ತಂದೆ ಕರಿಯ ವಾಸ: ಬೈದಳ: ಗುಡ್ಡೆ ನಾರಾವಿ ನಾರಾವಿ ಅಂಚೆ ಬೆಳ್ತಂಗಡಿ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ ರವರು ಹಾಗೂ ಸಿರಿಲ್ ಎಂಬವರು ಮೂಡಬಿದ್ರೆಯಲ್ಲಿ ಗಾರೆ ಕೆಲಸದ ಬಗ್ಗೆ ಹೋಗಿ ಕೆಲಸ ಮುಗಿಸಿ ವಾಪಾಸು ಅವರ ಮನೆಯಾದ ನಾರಾವಿಗೆ ಹೋಗುವರೇ  ಹೊಸ್ಮಾರು ಮಾರ್ಗವಾಗಿ  ನಂಬ್ರ; ಕೆಎ: 21, ಜೆ: 9186 ನೇ ಬೈಕ್ ನಲ್ಲಿ ಹೊಸ್ಮಾರ್ ಗೆ ಬಂದು ಹೊಸ್ಮಾರು ಪೇಟೆಯ ರಾಧಿಕಾ ಬಾರ್ ನ ಎದುರು ನಿಂತುಕೊಂಡು ಮಾತನಾಡುತ್ತಿರುವಾಗ  ಆರೋಪಿಗಳಾದ 1. ಸುರೇಂದ್ರ ವಾಸ: ಹೊಸ್ಮಾರು ಈದು ಗ್ರಾಮ ಮತ್ತು ಅಂಚೆ ಕಾರ್ಕಳ ತಾಲೂಕು 2.ನಾರಾಯಣ ಹೊಸ್ಮಾರು ಈದು ಗ್ರಾಮ ಮತ್ತು ಅಂಚೆ ಕಾರ್ಕಳ ತಾಲೂಕು, 3.ಬಾಬು ಹೊಸ್ಮಾರು ಈದು ಗ್ರಾಮ ಮತ್ತು ಅಂಚೆ ಕಾರ್ಕಳ ತಾಲೂಕು ಎಂಬವರು ಪಿರ್ಯಾದಿದಾರರಿಗೆ ಮತ್ತು ಸಿರಿಲ್ ರವರಿಗೆ ಹಲ್ಲೆ ನಡೆಸಿರುವುದಾಗಿದೆ. ಈ ಕೃತ್ಯಕ್ಕೆ ಆರೋಪಿ ಸುರೇಂದ್ರನಿಗೆ ಸಿರಿಲ್ ಮೇಲೆ ಇದ್ದ ಹಳೆಯ ದ್ವೇಷವೇ ಕಾರಣವಾಗಿರುತ್ತದೆ ಎಂಬುದಾಗಿ ಸುರೇಶ ರವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 112/2014 ಕಲಂ 323, 324 ಜೊತೆಗೆ 34 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: