ದಿನಾಂಕ 11.09.2014 ರಂದು ಕಾಪು
ಪೊಲೀಸ್ ಠಾಣಾ ಸರಹದ್ದಿನ ಉದ್ಯಾವರ ಗ್ರಾಮದ ಉದ್ಯಾವರ ರಾಹೇ 66 ರ ಹಾಲೀಮಾ ಸಬ್ಜು ಹಾಲ್
ಎದುರುಗಡೆ ರಾತ್ರಿ ಸುಮಾರು 7:30 ಗಂಟೆಗೆ ಸುಮಾರು 40-45 ವರ್ಷ ವಯಸ್ಸಿನ ಗಂಡಸನ್ನು ಕೊಲೆ ಮಾಡುವ ಉದ್ದೇಶದಿಂದಲೆ
ಯಾರೋ ಹರಿತವಾದ ಆಯುಧದಿಂದ ಕಡಿದು ಕೊಲೆ ಮಾಡಿದ್ದಾಗಿ ಉದ್ಯಾವರ ಗ್ರಾಮದ ಜಿತೇಂದ್ರ ಶೆಟ್ಟಿ
ತಂದೆ: ರತ್ನಾಕರ ಶೆಟ್ಟಿ ಎಂಬವರು ನೀಡಿದ
ದೂರಿನಂತೆ ಕಾಪು ಪೊಲೀಸ್ ಠಾಣಾ ಅ.ಕ್ರ 181/2014 ಕಲಂ 302, ಜೊತೆಗೆ 34
ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಕೊಲೆಯಾದ
ವ್ಯಕ್ತಿಯು ಉಡುಪಿ ನಗರ ಠಾಣೆಯ ರೌಡಿಶೀಟರ್ ಆಗಿರುವ ಪಿಟ್ಟಿ @ ನಾಗೇಶ್ ದೇವಾಡಿಗ ಪ್ರಾಯ: 41 ವರ್ಷ ತಂದೆ: ಬಸವ ದೇವಾಡಿಗ ವಾಸ: ಇಂದಿರ
ನಗ್ರ, ಕುಕ್ಕಿಕಟ್ಟೆ ಉಡುಪಿ ತಾಲೂಕು ಎಂಬುವರಾಗಿದ್ದು
ಆತನನ್ನು ಕೊಲೆಗೈದ ಆರೋಪಿಗಳನ್ನು ಮಾನ್ಯ ಶ್ರೀ ಪಿ.
ರಾಜೇಂದ್ರ ಪ್ರಸಾದ ಪೊಲೀಸ್ ಅಧೀಕ್ಷಕರು, ಉಡುಪಿ ಜಿಲ್ಲೆರವರ ನಿರ್ದೇಶನದಲ್ಲಿ, ಮಾನ್ಯ ಸಂತೋಷ ಕುಮಾರ ಹೆಚ್ಚುವರಿ
ಪೊಲೀಸ್ ಅಧೀಕ್ಷಕರು ಉಡುಪಿ ಜಿಲ್ಲೆ ರವರ ಮಾರ್ಗದರ್ಶನದಲ್ಲಿ , ಶ್ರೀ ಕೆ.ಅಣ್ಣಾಮಲೈ ,
ಐಪಿಎಸ್ ಸಹಾಯಕ ಪೊಲೀಸ್ ಅಧೀಕ್ಷಕರು
ಕಾರ್ಕಳ ಉಪ ವಿಭಾಗರದವರ
ಮಾರ್ಗದರ್ಶನದಲ್ಲಿ, ಉಡುಪಿ ಜಿಲ್ಲಾ ಡಿ.ಸಿ.ಐ.ಬಿ. ವಿಭಾಗದ ಪಿ.ಐ. ರವರಾದ ಶ್ರೀ ಜೈ
ಶಂಕರ ರವರಿಗೆ ದೊರೆತ ಖಚಿತ ಮಾಹಿತಿಯಂತೆ ಪಿ.ಐ.ಡಿ.ಸಿ.ಐ.ಬಿ. ಮತ್ತು ಅವರ ತಂಡ ಹಾಗೂ
ತನಿಖಾಧಿಕಾರಿ ಶ್ರೀ ಸುನಿಲ್ ವೈ. ನಾಯ್ಕ್ , ಪೊಲೀಸ್ ವೃತ್ತ
ನಿರೀಕ್ಷಕರು ಕಾಪು ವೃತ್ತ ಹಾಗೂ
ಅಧಿಕಾರಿ ಸಿಬ್ಬಂದಿಯವರ ರವರ ನೇತೃತ್ವದಲ್ಲಿ
ಜಂಟಿಯಾಗಿ ಕ್ಷಿಪ್ರ ಕಾರ್ಯಚರಣೆ ನಡೆಸಿ ದಿನಾಂಕ: 12.09.2014 ರಂದು
ಮದ್ಯಾಹ್ನ 12.15 ಗಂಟೆಗೆ ಉದ್ಯಾವರ ಗ್ರಾಮದ ಬೊಳ್ಜೆ ಗಾಳಿಕುದ್ರು ರೈಲ್ವೆ ಬ್ರಿಡ್ಜ್
ಬಳಿ ತೋಟದಲ್ಲಿ ಅಡಗಿ ಕುಳಿತಿದ್ದ ಆರೋಪಿಗಳಾದ
1) ಐವನ್ ರಿಚರ್ಡ @ ಮುನ್ನ
ಪ್ರಾಯ 33 ವರ್ಷ, ತಂದೆ :ಜೋಸೆಫ್
ಮಸ್ಕೇರೆನಿಯಸ್ ವಾಸ: ಸಲಾಮಿ ಕಾಟೇಜ್ ನೇಜಾರು ರೈಸ್ ಮಿಲ್ಲನ ಮುಂಭಾಗ, ಪ್ರಗತಿ ನಗರ ಮೂಡುತೋತ್ಸೆ
ಗ್ರಾಮ ಸಂತೆಕಟ್ಟೆ ಉಡುಪಿ ತಾಲೂಕು
2) ಗುರುಪ್ರಸಾದ ಶೆಟ್ಟಿ ಪ್ರಾಯ : 26
ವರ್ಷ ತಂದೆ: ಗೋವಿಂದ ಶೆಟ್ಟಿ ವಾಸ:ಅಲೆವೂರು ದೊಡ್ಡ ಮನೆ ಗುಡ್ಡೆಯಂಗಡಿ ಪೋಸ್ಟ್, ಅಲೆವೂರು ಗ್ರಾಮ, ಪೆಟ್ರೋಲ್ ಬಂಕ್ ಬಳಿ ಉಡುಪಿ ತಾಲೂಕು
3) ಸಂತೋಷ ಪೂಜಾರಿ ಪ್ರಾಯ: 32 ವರ್ಷ ತಂದೆ : ದಿ ಶಂಕರ ಪೂಜಾರಿ ವಾಸ: ಮೂಡುಮನೆ 76ನೇ
ಬಡಗುಬೆಟ್ಟು ಹನುಮಾನ್ ಗ್ಯಾರೇಜ್ ಬಳಿ ಬೈಲೂರು ಗ್ರಾಮ ಉಡುಪಿ ತಾಲೂಕು
4) ವಿಶ್ವನಾಥ ಶೆಟ್ಟಿ ಪ್ರಾಯ:32
ತಂದೆ: ಭೋಜ ಶೆಟ್ಟಿ ವಾಸ: ರಾಧ ನಿವಾಸ ಮೇಲ್ಮನೆ ಕೋರಂಗ್ರಪಾಡಿ ಗ್ರಾಮ ಉಡುಪಿ
ತಾಲೂಕು
5) ಜಾಕೀರ್ ಹುಸೈನ್ ಪ್ರಾಯ: 25 ವರ್ಷ
ತಂದೆ: ಮೊಹಮ್ಮದ್ ಹನೀಫ್ ವಾಸ: ಕಲ್ಯಾಣ ನಗರ 76 ನೇ ಬಡಗು ಬೆಟ್ಟು ಕುಕ್ಕಿಕಟ್ಟೆ ಉಡುಪಿ ತಾಲೂಕು
ಎಂಬವರನ್ನು ಸೆರೆ ಹಿಡಿದು ಆರೋಪಿಗಳಿಂದ
ಕೃತ್ಯಕ್ಕೆ ಬಳಸಿದ್ದ ಈ ಕೆಳಗೆ ನಮೂದಿಸಿರುವ
ಸ್ವತ್ತುಗಳನ್ನು ವಶಪಡಿಸಲಾಗಿರುತ್ತದೆ.
·
ತಲವಾರು - 2
·
ದೊಡ್ಡ ಗಾತ್ರದ ಚೂರಿ-1
·
ಕೆ ಎ 20 ಎಂ 7493 ನೇ ನಂಬ್ರದ ಮಾರುತಿ 800 ಕಾರು
·
ಕೆ.ಎ. 20. ಬಿ. 6757 ನೇ ಪೋರ್ಡ ಫಿಸ್ತಾ ಕಾರು.
·
ಆರೋಪಿಗಳು ಕೃತ್ಯಕ್ಕೆ ಬಳಸಿದ್ದ 5 ಮೋಬೈಲ್ ಹ್ಯಾಂಡಸೆಟ್
ಇವರುಗಳು ಈಗಾಗಲೇ ಮೃತ ಪಿಟ್ಟಿ @ ನಾಗೇಶ್
ದೇವಾಡಿಗನಿಂದ ಕೊಲೆಯಾಗಿರುವ ರೌಡಿ ವಿನೋದ್ ಶೆಟ್ಟಿಗಾರ್ ಎಂಬಾತನ ಸಹಚರರಾಗಿದ್ದು ಈ ಕೊಲೆಯ ಪ್ರತೀಕಾರವಾಗಿ
ಪಿಟ್ಟಿ ನಾಗೇಶ್ ನನ್ನು ಕೊಲೆ ನಡೆಸಿರುವುದು ತಿಳಿದುಬಂದಿರುತ್ತದೆ.
ಈ
ಕಾರ್ಯಚರಣೆಯಲ್ಲಿ ಶ್ರೀ ಜೈ ಶಂಕರ, ಪಿ.ಐ. ಡಿಸಿಐಬಿ, ಉಡುಪಿ ಹಾಗೂ ಅವರ ಸಿಬ್ಬಂದಿಯವರಾದ ಎ.ಎಸ್.ಐ. ನಾರಾಯಣ, ಎ.ಎಸ್.ಐ. ರೊಸಾರಿಯೋ ಡಿಸೋಜಾ, ಹೆಚ್.ಸಿ. ಪ್ರಕಾಶ್, ಪಿ.ಸಿ ಚಂದ್ರಶೆಟ್ಟಿ, ದಿನೇಶ್ ಶೆಟ್ಟಿ, ಉದಯ್ ಕುಂದರ್, ಅಶೋಕ ಕುಮಾರ್, ರಾಜೇಶ್, ರತ್ನಾಕರ, ಸತೀಶ್ ಇಲಾಖಾ ವಾಹನ ಕೆ.ಎ. 20. ಜಿ. 327 ಚಾಲಕ ಚಂದ್ರಶೇಖರ ಹಾಗೂ ತನಿಖಾಧಿಕಾರಿ
ಶ್ರೀ ಸುನಿಲ್ ನಾಯ್ಕ್, ಸಿಪಿಐ ಕಾಪು ಹಾಗೂ ಅವರ ಸಿಬ್ಬಂದಿಯವರು, ಪಡುಬಿದ್ರೆ ಠಾಣಾ ಪಿ.ಎಸ್.ಐ. ಶ್ರೀ ಅಜ್ಮತ್ ಆಲಿ ಹಾಗೂ ಶಿರ್ವ ಠಾಣಾ ಪಿ.ಎಸ್.ಐ
ಶ್ರೀ ಅಶೋಕ್ ಪಿ. ಇವರು ಸಹಕರಿಸಿರುತ್ತಾರೆ.
ಮೃತ ಪಿಟ್ಟಿ @ ನಾಗೇಶ್
ದೇವಾಡಿಗನ ವಿರುದ್ದ ಈ ಕೆಳಗಿನ ಪ್ರಕರಣಗಳು ದಾಖಲಾಗಿರುತ್ತದೆ.
1)ಉಡುಪಿ ನಗರ ಠಾಣಾ ಅ,ಕ್ರ 87/93
ಕಲಂ: 110 (ಇ) ಸಿ ಆರ್ ಪಿ ಸಿ
2) ಉಡುಪಿ ನಗರ ಠಾಣಾ ಅ.ಕ್ರ 124/93 ಕಲಂ 506 ಐಪಿಸಿ
3)ಉಡುಪಿ ನಗರ ಠಾಣಾ ಅ.ಕ್ರ 160/93, ಕಲಂ 143,147,148,324 ಜೊತೆಗೆ 149 ಐಪಿಸಿ
4) ಉಳ್ಳಾಲ ಠಾಣಾ ಅ.ಕ್ರ 233/95, ಕಲಂ: 143,147,148,302 ಜೊತೆಗೆ 149 ಐಪಿಸಿ ಮತ್ತು ಕಲಂ 3&25 ಭಾರತೀಯ ಸಶಸ್ತ್ರ ಕಾಯಿದೆ
5) ಉಡುಪಿ ನಗರ ಠಾಣೆ ಅ.ಕ್ರ 12/02 ಕಲಂ: 3, 25 ಸಶಸ್ತ್ರ ಕಾಯಿದೆ
6) ಶಿರ್ವ ಪೊಲೀಸ್ ಠಾಣಾ ಅ.ಕ್ರ 15/02 ಕಲಂ: 302, 201 ಐಪಿಸಿ
7) ಉಡುಪಿ ನಗರ ಠಾಣಾ
ಅ.ಕ್ರ: 290/02
ಕಲಂ: 110
ಸಿ ಆರ್ ಪಿ ಸಿ
8) ಉಡುಪಿ ನಗರ ಠಾಣೆ ಅ.ಕ್ರ 269/03 ಕಲಂ:143, 147, 341,
324, 506 ಜೊತೆಗೆ 149 ಐಪಿಸಿ
9) ಉಡುಪಿ ನಗರ ಠಾಣೆ
ಅ.ಕ್ರ 194/04 ಕಲಂ: 504, 506 ಜೊತೆಗೆ 34 ಐಪಿಸಿ
10) ಉಡುಪಿ ನಗರ ಠಾಣಾ
ಅ.ಕ್ರ: 196/04
ಕಲಂ: 110 (ಇ)(ಜಿ) ಸಿ ಆರ್ ಪಿ ಸಿ
11) ಉಡುಪಿ ನಗರ ಠಾಣಾ
ಅ.ಕ್ರ: 263/05
ಕಲಂ:107,151
ಸಿ ಆರ್ ಪಿ ಸಿ
12) ಉಡುಪಿ ನಗರ ಠಾಣಾ ಅ.ಕ್ರ 141/06 ಕಲಂ 107 ಸಿ ಆರ್ ಪಿ ಸಿ
13) ಮಣಿಪಾಲ ಠಾಣೆ, ಅ.ಕ್ರ 135/06 ಕಲಂ: 143, 147, 148, 302 ಜೊತೆಗೆ 149 ಐ.ಪಿ.ಸಿ
14) ಉಡುಪಿ ನಗರ ಠಾಣೆ
ಅ.ಕ್ರ 229/06 ಕಲಂ 143, 147, 148,
341, 323, 324, 504 ಜೊತೆಗೆ 149 ಐಪಿಸಿ
15) ಉಡುಪಿ ನಗರ ಠಾಣಾ ಅ.ಕ್ರ 237/06, ಕಲಂ 107 ಸಿ ಆರ್ ಪಿ ಸಿ
16)ಉಡುಪಿ ನಗರ ಠಾಣಾ ಅ.ಕ್ರ 256/07 ಕಲಂ 110(ಇ)(ಜಿ) ಸಿ ಆರ್.ಪಿ.ಸಿ
17) ಉಡುಪಿ ನಗರ ಠಾಣಾ ಅ.ಕ್ರ 140/08, ಕಲಂ 110(ಇ)(ಜಿ) ಸಿ ಆರ್ ಪಿ ಸಿ
18) ಉಡುಪಿ ನಗರ ಠಾಣಾ ಅ.ಕ್ರ 185/08, ಕಲಂ 107 ಸಿ.ಆರ್.ಪಿ.ಸಿ
19) ಉಡುಪಿ ನಗರ ಠಾಣಾ ಅ.ಕ್ರ 98/09 ಕಲಂ 110(ಇ)(ಜಿ) ಸಿ ಆರ್ ಪಿ ಸಿ
20) ಮಣಿಪಾಲ ಠಾಣಾ ಅ.ಕ್ರ 115/09 ಕಲಂ: 323, 324, 506 ಜೊತೆಗೆ 34 ಐ.ಪಿ.ಸಿ
21) ಉಡುಪಿ ನಗರ ಠಾಣಾ ಅ.ಕ್ರ 261/10 ಕಲಂ 87 ಕೆ.ಪಿ ಕಾಯಿದೆ
22) ಹಿರಿಯಡ್ಕ ಠಾಣಾ ಅ.ಕ್ರ 4/11 ಕಲಂ 302 ಜೊತೆಗೆ 34
ಐ.ಪಿ.ಸಿ
ಆಪಾದಿತರುಗಳ
ವಿರುದ್ದ ಈ ಕೆಳಗಿನ ಪ್ರಕರಣಗಳು ದಾಖಲಾಗಿರುತ್ತದೆ.
1) ಐವನ್ ರಿಚರ್ಡ ಮುನ್ನ ಈತನ ವಿರುದ್ದ ಉಡುಪಿ ನಗರ ಠಾಣಾ ಅ.ಕ್ರ 128/11
ಕಲಂ: 3, 25 ಸಶಸ್ತ್ರ ಕಾಯಿದೆ ಪ್ರಕರಣ ದಾಖಲಾಗಿರುತ್ತದೆ.
2) ಗುರುಪ್ರಸಾದ ಶೆಟ್ಟಿ ಈತನ ವಿರುದ್ದ ಉಡುಪಿ ನಗರ ಠಾಣಾ ಅ.ಕ್ರ 72/12 ಕಲಂ: 307 ಜೊತೆಗೆ 34 ಐಪಿಸಿ 2) ಉಡುಪಿ ನಗರ ಠಾಣಾ ಅ.ಕ್ರ 34/11
ಕಲಂ: 107, 116(ಸಿ) ಸಿ.ಆರ್.ಪಿ.ಸಿ 3) ಉಡುಪಿ ನಗರ ಠಾಣಾ ಅ.ಕ್ರ 251/11
ಕಲಂ: 110 (ಇ) (ಜಿ) ಸಿ.ಆರ್.ಪಿ.ಸಿ 4) ಕಾಪು
ಠಾಣಾ ಅ.ಕ್ರ 72/13 ಕಲಂ 307 , 504 ಜೊತೆಗೆ 34 ಐ.ಪಿ.ಸಿ 5) ಮಣಿಪಾಲ ಠಾಣಾ ಅ.ಕ್ರ 88/12 ಕಲಂ 399, 402, 353, 307, 120(ಬಿ) ಐ.ಪಿ.ಸಿ 6) ಮಣಿಪಾಲ ಠಾಣಾ ಅ.ಕ್ರ 64/13 ಕಲಂ: 110 (ಇ) (ಜಿ)
ಸಿ.ಆರ್.ಪಿ.ಸಿ 7) ಉಡುಪಿ ಸಂಚಾರ ಠಾಣಾ ಅ.ಕ್ರ 151/13 ಕಲಂ: 279, 337 ಐಪಿಸಿ 8) ಕಾಪು
ಠಾಣಾ ಅ.ಕ್ರ 204/13 ಕಲಂ:
110 ಸಿ.ಆರ್.ಪಿ.ಸಿ ಪ್ರಕರಣಗಳು ದಾಖಲಾಗಿರುತ್ತದೆ.
3) ಸಂತೋಷ ಪೂಜಾರಿ ಈತನ
ವಿರುದ್ದ ಕಾಪು ಠಾಣಾ ಅ.ಕ್ರ 72/13 ಕಲಂ: 307, 504 ಜೊತೆಗೆ 34
ಐಪಿಸಿ ಪ್ರಕರಣ ದಾಖಲಾಗಿರುತ್ತದೆ.
4) ವಿಶ್ವನಾಥ ಶೆಟ್ಟಿ ಈತನ
ವಿರುದ್ದ 1) ಉಡುಪಿ ನಗರ ಠಾಣಾ ಅ.ಕ್ರ 232/12 ಕಲಂ: 341, 307 ಐಪಿಸಿ
2) ಉಡುಪಿ ನಗರ ಠಾಣಾ ಅ.ಕ್ರ 04/14 ಕಲಂ: 387 ಜೊತೆಗೆ 34 ಐಪಿಸಿ 3) ಉಡುಪಿ ನಗರ ಠಾಣಾ
ಅ.ಕ್ರ 468/13 ಕಲಂ: 110 (ಜಿ) ಸಿ.ಆರ್.ಪಿ.ಸಿ ಪ್ರಕರಣಗಳು ದಾಖಲಾಗಿರುತ್ತದೆ.
5) ಜಾಕೀರ್ ಹುಸೈನ್ ಈತನ ವಿರುದ್ದ 1) ಕಾಪು ಠಾಣಾ ಅ.ಕ್ರ 72/13 ಕಲಂ 307 , 504 ಜೊತೆಗೆ 34 ಐ.ಪಿ.ಸಿ 2) ಕಾಪು ಠಾಣಾ ಅ.ಕ್ರ 211/13 ಕಲಂ:
110 ಸಿ.ಆರ್.ಪಿ.ಸಿ ಪ್ರಕರಣಗಳು ದಾಖಲಾಗಿರುತ್ತದೆ.
No comments:
Post a Comment