ಜೀವ ಬೆದರಿಕೆ ಹಾಕಿದ ಪ್ರಕರಣ
- ಕಾರ್ಕಳ: ದಿನಾಂಕ 20.07.2014 ರಂದು ಸಂಜೆ 17:00 ಗಂಟೆಗೆ ಕಾರ್ಕಳ ತಾಲೂಕು ನಲ್ಲೂರು ಗ್ರಾಮದ ದುರ್ಗಾ ನಿವಾಸ ಸರೋಜಿನಿ ಕೃಷ್ಣ ಕುಂದರ್, ವಾಸ:ದುರ್ಗಾ ಕೃಪಾ,ನಲ್ಲೂರು ಗ್ರಾಮ,ಕಾರ್ಕಳ ತಾಲೂಕು ರವರ ವಾಸದ ಮನೆಗೆ ಆರೋಪಿತರುಗಳಾದ 1. ದಿನೇಶ್ ಸಾಲಿಯಾನ್, ಪ್ರಾಯ 30, ತಂದೆ:ದೊಂಬಯ್ಯ ಸಾಲಿಯಾನ್, ವಾಸ: ಲೆಮಿನಾ ಪೌಂಡ್ರಿ, ನಿಟ್ಟೆ ಗ್ರಾಮ,ಕಾರ್ಕಳ.2. ಜಯ ಕುಂದರ್,ಪ್ರಾಯ 45, ತಾಯಿ: ಕಾವೇರಿ, ವಾಸ: ನಾರಾವಿ ಟೌನ್,ಬೆಳ್ತಂಗಡಿ ತಾಲೂಕು, ದ,ಕ ಜಿಲ್ಲೆ,3.ಶ್ರೀನಿವಾಸ, ಪ್ರಾಯ 40, ತಂದೆ: ಸುಬ್ಬಯ್ಯ, ವಾಸ:ಮಂಜೆಟ್ಟು, ನಲ್ಲೂರು ಗ್ರಾಮ,ಕಾರ್ಕಳ ತಾಲೂಕುರವರುಗಳು ಅಕ್ರಮ ಪ್ರವೇಶ ಮಾಡಿ, ಮನೆಯಲ್ಲಿದ್ದ ಪಿಠೋಪಕರಣಗಳನ್ನು ಹಾಳು ಮಾಡಿ ನಷ್ಠವುಂಟು ಮಾಡಿದ್ದಲ್ಲದೇ ತಡೆಯಲು ಬಂದ ಅವರ ಗಂಡ ಕೃಷ್ಣ ಕುಂದರ್ ಇವರಿಗೆ ಕೈಯಿಂದ ದೊಣ್ಣೆಯಿಂದ ಹಾಗೂ ಇಟ್ಟಿಗೆಯಿಂದ ಮುಖಕ್ಕೆ ಬೆನ್ನಿಗೆ ಹಾಗೂ ಕಾಲಿನ ಗಂಟಿಗೆ ಹೊಡೆದು ಹಲ್ಲೆ ಜೀವ ಬೆದರಿಕೆ ಹಾಕಿರುವುದಾಗಿದೆ ಎಂಬುದಾಗಿ ಸರೋಜಿನಿ ಕೃಷ್ಣ ಕುಂದರ್ ರವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಅಪರಾಧ ಕ್ರಮಾಂಕ 103/2014 ಕಲಂ 448,427,323,324,506(2) ಜೊತೆಗೆ 34 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
No comments:
Post a Comment