ಆತ್ಮಹತ್ಯೆ
ಪ್ರಕರಣ
- ಮಲ್ಪೆ: ದಿನಾಂಕ 18/09/2014 ರಂದು ಪಿರ್ಯಾದಿದಾರರಾದ ಶ್ರೀಮತಿ ಸುಂದರ ಪೂಜಾರ್ತಿ ಗಂಡ: ಡಿ. ಜೋಗು ಪೂಜಾರಿ, ವಾಸ: ಗಿರಿಜಾ ನಿಲಯ, ಈಶ್ವರ ನಗರ, ತೆಂಕನಿಡಿಯೂರು ಗ್ರಾಮ, ಉಡುಪಿ ತಾಲೂಕು ಎಂಬವರ ಮಗನಾದ ಸಂತೋಷ್ ಕುಮಾರ್ (25) ಎಂಬವರು ಮಧ್ಯಾಹ್ನ 1:30 ಗಂಟೆಯಿಂದ 2:30 ಗಂಟೆಯ ಮಧ್ಯಾವಧಿಯಲ್ಲಿ ತನ್ನ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಮನೆಯ ಸ್ನಾನದ ಕೊಠಡಿಯ ಮಾಡಿನ ಪಕ್ಕಾಸಿಗೆ ನೈಲಾನ್ ಹಗ್ಗ ಕಟ್ಟಿ ಕುತ್ತಿಗೆಗೆ ಬಾತ್ ಟವಲ್ ಸುತ್ತಿ ಉರುಳು ಹಾಕಿಕೊಂಡು ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಸದ್ರಿಯವನ ಆತ್ಮಹತ್ಯೆಗೆ ಕಾರಣ ತಿಳಿದಿಲ್ಲ ಎಂಬುದಾಗಿ ಶ್ರೀಮತಿ ಸುಂದರ ಪೂಜಾರ್ತಿ ರವರು ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 43/2014 ಕಲಂ 174 ಸಿಆರ್ಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
No comments:
Post a Comment