ಅಪಘಾತ ಪ್ರಕರಣ
- ಪಡುಬಿದ್ರಿ: ದಿನಾಂಕ. 11.09.2014 ರಂದು ರಾತ್ರಿ 23:30 ಗಂಟೆಗೆ ಹೆಜಮಾಡಿ ಗ್ರಾಮದ ಬಿಟ್ಟು ದಾಬಾದ ಹತ್ತಿರ ರಾ.ಹೆ 66 ರಲ್ಲಿ ಕೆ.ಎಲ್-14-ಜೆ-5015 ನೇ ಆಲ್ಟೋ ಕಾರಿನ ಚಾಲಕ ಕಾರನ್ನು ಮಂಗಳೂರಿನಿಂದ ಉಡುಪಿ ಕಡೆಗೆ ರಸ್ತೆಯ ವಿರುದ್ದ ದಿಕ್ಕಿನಿಂದ ಅತೀ ವೇಗ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ನೊಂದಣೀಯಾಗದ ಹೊಸ ಸ್ವಿಫ್ಟ್ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಆಲ್ಟೋ ಕಾರಿನಲ್ಲಿದ್ದ ಪ್ರಯಾಣಿಕರಾದ 1) ಅಬ್ದುಲ್ ಸುಬೇರ್, 2) ಅಮ್ಜೀದ್ ಖಾನ್, 3) ನಜೀಮ್ ಅಬ್ದುಲ್ಲಾ ಎಂಬವರಿಗೆ ಗಾಯವಾಗಿರುತ್ತದೆ ಹಾಗೂ 2 ಕಾರುಗಳೂ ಜಖಂ ಗೊಂಡಿರುತ್ತದೆ ಎಂಬುದಾಗಿ ನಿತಿನ್ ಸಿ ಕೋಟ್ಯಾನ್ (36) ತಂದೆ: ಚಂದ್ರಶೇಖರ. ಕೆ. ವಾಸ: ಶ್ರೀ ಸನ್ನಿಧಿ, ಪಕ್ಕಲಡ್ಕ ಬಜಾಲ್, ಮಂಗಳೂರು ರವರು ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 96/2014 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಮನುಷ್ಯ ಕಾಣೆ ಪ್ರಕರಣ
- ಅಜೆಕಾರು: ಪಿರ್ಯಾದುದಾರರಾದ ಶ್ರೀಮತಿ ಸಚೇತ (44) ಗಂಡ: ಮನೋಹರ ಶೆರ್ವೇಗಾರ್ ವಾಸ: ದೊಡ್ಡಮನೆ, ಅಂಡಾರು ಗ್ರಾಮ ಕಾರ್ಕಳ ತಾಲೂಕು ಎಂಬವರ ಗಂಡ ಮನೋಹರ ಸೆರ್ವೆಗಾರ (50) ಎಂಬವರು ದಿನಾಂಕ 25-09-1990 ರಂದು ಕಾರ್ಕಳ ತಾಲೂಕು ಅಂಡಾರು ಗ್ರಾಮದ ದೊಡ್ಡಮನೆ ಎಂಬಲ್ಲಿರುವ ತನ್ನ ಮನೆಯಿಂದ ಯಾರಿಗೂ ತಿಳಿಸದೇ ಮನೆ ಬಿಟ್ಟು ಹೋದವರು ಈ ವರೆಗೂ ವಾಪಾಸು ಮನೆಗೆ ಬಾರದೇ ಕಾಣೆಯಾಗಿರುವುದಾಗಿದೆ ಎಂಬುದಾಗಿ ಶ್ರೀಮತಿ ಸಚೇತ ರವರು ನೀಡಿದ ದೂರಿನಂತೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 45/2014 ಕಲಂ ಮನುಷ್ಯ ಕಾಣೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
No comments:
Post a Comment