Tuesday, September 02, 2014

Daily Crime Reports as on 02/09/2014 at 19:30 Hrs.



ಮನುಷ್ಯ ಕಾಣೆ ಪ್ರಕರಣ 
  • ಮಲ್ಪೆ: ಪವನ್ ಶೆಟ್ಟಿ (21ವರ್ಷ)ತಂದೆ: ಜಯಕರ  ಶೆಟ್ಟಿ ವಾಸ: ಶ್ರೀ ದೇವಿನಿಲಯ, ಕೆಳಾರ್ಕಳಬೆಟ್ಟು ಗ್ರಾಮ ಮತ್ತು ಅಂಚೆ ಉಡುಪಿ ತಾಲೂಕು ಇವರ ತಂದೆ ಜಯಕರ ಶೆಟ್ಟಿ (57ವರ್ಷ)ರವರು ದಿನಾಂಕ 01/09/2014 ರಂದು ಮದ್ಯಾಹ್ನ 3:00 ಗಂಟೆಗೆ ತನ್ನ ಮನೆಯಾದ ಕೆಳಾರ್ಕಳಬೆಟ್ಟು ಗ್ರಾಮದ ಶ್ರೀದೇವಿ ನಿಲಯ ಎಂಬಲ್ಲಿಂದ ಹಿರೇಬೆಟ್ಟಿನ ಬಾಳ್ಕಟ್ಟು ಮನೆಗೆ ಹೋಗಿ ಬರುವುದಾಗಿ ಹೇಳಿ ಹೋದವರು ಈ ವರೆಗೆ ವಾಪಾಸ್ಸು ಮನೆಗೆ ಬಾರದೆ ಕಾಣೆಯಾಗಿರುತ್ತಾರೆ ಎಂಬುದಾಗಿ ಪವನ್ ಶೆಟ್ಟಿ ರವರು ನೀಡಿದ ದೂರಿನಂತೆ ಮಲ್ಪೆ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 152/14 ಕಲಂ ಮನುಷ್ಯ ಕಾಣೆಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕಾಣೆಯಾದವರ ಚಹರೆ: ಸುಮಾರು 5 ಅಡಿ ಎತ್ತರವಿದ್ದು  ತುಂಬು ತೋಳಿನ ಬಿಳಿ ಅಂಗಿ ಮತ್ತು ಕಪ್ಪು ಪ್ಯಾಂಟ್ ಧರಿಸಿದ್ದು, ಗೋಲ್ಡನ್ ಕಲರ್ ವಾಚ್ ಧರಿಸಿರುತ್ತಾರೆ. ಕನ್ನಡ ಮತ್ತು ತುಳು ಭಾಷೆ ಬಲ್ಲವಾಗಿರುತ್ತಾರೆ. 
ಅಸ್ವಾಭಾವಿಕ ಮರಣ ಪ್ರಕರಣ  
  • ಕೋಟ: ಗೋಪಾಲ ಪೂಜಾರಿ(45) ತಂದೆ: ದಿ. ನಂದಿ ಪೂಜಾರಿ ವಾಸ: ಹಾಡಿಮನೆ, ಮಣೂರು ಗ್ರಾಮ ಕೋಟತಟ್ಟು ಪೋಸ್ಟ್  ಉಡುಪಿ ತಾಲೂಕು ಎಂಬವರ ಮಗ ಪ್ರದೀಪ(24)ರವರು ದಿನಾಂಕ 02/09/20104ರ ಮಧ್ಯಾಹ್ನ ಸುಮಾರು 12.30 ಗಂಟೆಯಿಂದ 01.30 ಗಂಟೆಯ ಮಧ್ಯಾವದಿಯಲ್ಲಿ ಉಡುಪಿ ತಾಲೂಕು ಕೋಟತಟ್ಟು ಗ್ರಾಮದ ಕೋಟತಟ್ಟು ಪಡುಕೆರೆ ಎಂಬಲ್ಲಿರುವ ಮೋಹನ್ ದಾಸ್ ಶೆಣೈರವರ ಹಳೇ ಕಟ್ಟಡದಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ, ಮೃತರು ವಿಪರೀತ ಮದ್ಯ ಸೇವನೆ ಮಾಡುವ ಚಟದವನಾಗಿದ್ದು ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಮೃತರ ಮರಣದಲ್ಲಿ ಬೇರೆ ಯಾವುದೇ ಸಂಶಯವಿರುವುದಿಲ್ಲ  ಎಂಬುದಾಗಿ ಗೋಪಾಲ ಪೂಜಾರಿ ರವರು ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಕ್ರಮಾಂಕ 41/2014 ಕಲಂ 174  ಸಿ.ಆರ್‌.‌ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: