ಕಳವು ಪ್ರಕರಣ
- ಕಾರ್ಕಳ: ದಿನಾಂಕ 24.7.2014 ರಂದು 12:00 ಗಂಟೆಗೆ ಕಾರ್ಕಳ ಕಸಬ ಗ್ರಾಮದ ಬಂಗ್ಲೆ ಗುಡ್ಡೆ ನಿವಾಸಿ ಶ್ರೀಮತಿ ಜಯಂತಿ ಕಾಮತ್ ಎಂಬವರು ದಿನಾಂಕ 4.5.2014 ರಿಂದ 28.5.2014 ರ ಮಧ್ಯೆ ಚೆನ್ನರಾಯಪಟ್ಟಣದಲ್ಲಿ ಮಗಳೊಂದಿಗೆ ವಾಸವಾಗಿರುವ ಸಮಯ ಅವರ ವಾಸ್ತವ್ಯದ ಮನೆಯ ಬಾಗಿಲಿನ ಬೀಗವನ್ನು ಮುರಿದು ಬೆಳ್ಳಿಯ ಸಣ್ಣ ದೀಪ-4, ಬೆಳ್ಳಿಯ ನೀಲಾಂಜನ-3, ಬೆಳ್ಳಿಯ ಕುಂಕುಮದ ಡಬ್ಬಿ-1, ಬೆಳ್ಳಿಯ ಕೀ ಚೈನ್-1, ಬೆಳ್ಳಿಯ ಚಿಕ್ಕತಟ್ಟೆ-1, ಸುಮಾರು ಒಂದು ಪವನಿನ ಬಂಗಾರದ ಕರಿಮಣಿ ಸರ-1, ಬಂಗಾರದ ದಾರೆಗುಂಡು-1 (2ಗ್ರಾಂ) ಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಕಳವಾದ ಒಟ್ಟು ಸೊತ್ತಿನ ಅಂದಾಜು ಮೌಲ್ಯ 24,000/- ರೂಪಾಯಿ ಆಗಿರುತ್ತದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 145/2014 ಕಲಂ 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
ಅಸ್ವಾಭಾವಿಕ ಮರಣ ಪ್ರಕರಣ
- ಉಡುಪಿ: ಆಗ್ನಿಸ್ ಡಿ ಸೋಜಾ ಇವರ ಗಂಡ ಮಾರ್ಕ್ ಡಿ ಸೋಜಾ ಇವರು ದಿನಾಂಕ 23/07/14 ರಂದು ರಾತ್ರಿ ಸುಮಾರು 00:50 ಗಂಟೆಗೆ ಟಾಯ್ಲೆಟ್ ನಲ್ಲಿ ಮಗುಚಿ ಬಿದ್ದಿದ್ದು ಚಿಕಿತ್ಸೆಯ ಬಗ್ಗೆ ಟಿಎಮ್ಎ ಪೈ ಆಸ್ಪತ್ರೆಗೆ ಸಮಯ ಸುಮಾರು 01:05 ಗಂಟೆಗೆ ಕರೆದುಕೊಂಡು ಬಂದಲ್ಲಿ ಪರೀಕ್ಷಿಸಿದ ವೈದ್ಯಾಧಿಕಾರಿಗಳು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ ಎಂಬಿತ್ಯಾದಿ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ಕ್ರಮಾಂಕ: 46/14 ಕಲಂ: 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
- ಶಂಕರನಾರಾಯಣ: ಶರತ್ಶೆಟ್ಟಿ (34 ವರ್ಷ) ಎಂಬಾತನು ದಿನಾಂಕ 23-07-2014 ರಂದು ರಾತ್ರಿ 7:00 ಗಂಟೆಯಿಂದ 8:00 ಗಂಟೆಯ ನಡುವಿನ ಅವದಿಯಲ್ಲಿ ಕುಂದಾಪುರ ತಾಲೂಕು 28 ಹಾಲಾಡಿ ಗ್ರಾಮದ ಹಾಲಾಡಿ ಪೇಟೆಯಲ್ಲಿರುವ ತನ್ನ ಮನೆಯ ಹತ್ತಿರದ ಬಾವಿಯಲ್ಲಿ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ಕ್ರಮಾಂಕ: 17/14 ಕಲಂ: 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
No comments:
Post a Comment