ಅಪಘಾತ ಪ್ರಕರಣ
- ಬೈಂದೂರು: ದಿನಾಂಕ 26/07/14 ರಂದು ಮಧ್ಯಾಹ್ನ ಸಮಯ 1:00 ಗಂಟೆಗೆ ನಾಗೂರು ಕಡೆಯಿಂದ ಕುಂದಾಪುರ ಕಡೆಗೆ ಎನ್ ಹೆಚ್ 66 ನೇದರಲ್ಲಿ ಕೆ ಎ 20ಕ್ಯೂ 9811 ನೇ ನಂಬ್ರದ ಮೋಟಾರು ಸೈಕಲ್ ಸವಾರ ಚಂದ್ರ ನಾಯ್ಕ ರವರು ತನ್ನ ಮೋಟಾರು ಸೈಕಲನಲ್ಲಿ ಹಿಂಬದಿ ಸವಾರನನ್ನಾಗಿ ಸುನೀಲ್ ನಾಯಕ್ ರವರನ್ನು ಕುಳ್ಳಿರಿಸಿಕೊಂಡು ಅತೀವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ಕಿರಿಮಂಜೇಶ್ವರ ಗ್ರಾಮದ ಶಾಲೆಬಾಗಿಲು ಬಸ್ ಸ್ಟ್ಯಾಂಡ್ ಬಳಿ ತಲುಪುವಾಗ್ಗೆ ರಾ.ಹೆ 66 ನೇ ದರ ತೀರಾ ಎಡಬದಿಗೆ ಚಲಾಯಿಸಿ ಮಣ್ಣಿನ ಕಚ್ಚಾ ರಸ್ತೆಯಲ್ಲಿ ಬಸ್ಸಿಗಾಗಿ ಕಾದು ನಿಂತುಕೊಂಡಿದ್ದ ವಿದ್ಯಾ ಎಂಬವರಿಗೆ ಡಿಕ್ಕಿ ಹೊಡೆದ ಪರಿಣಾಮ ಮೋಟಾರು ಸೈಕಲ್ ಹಿಂಬದಿ ಸವಾರನಾಗಿದ್ದ ಸುನೀಲ್ ನಾಯಕ್ ರವರು ಹಾಗೂ ವಿದ್ಯಾರವರು ಗಾಯಗೊಂಡಿದ್ದು ಅಪಘಾತಪಡಿಸಿದ ಮೋಟಾರು ಸೈಕಲ್ ಮುಂದಕ್ಕೆ ಹೋಗಿ ಅಲ್ಲಿಯೇ ನಿಂತುಕೊಂಡಿದ್ದ ಇನ್ನೊಬ್ಬ ವ್ಯಕ್ತಿಗೆ ಡಿಕ್ಕಿ ಹೊಡೆದು ಆ ವ್ಯಕ್ತಿಯು ಗಾಯಗೊಂಡಿದ್ದು, ನಂತರ ಅಪಘಾತಪಡಿಸಿದ ಮೋಟಾರು ಸೈಕಲ್ ಸವಾರ ಮೋಟಾರು ಸೈಕಲನ್ನು ನಿಲ್ಲಿಸದೇ ಸ್ಥಳದಿಂದ ಪರಾರಿಯಾಗಿರುತ್ತಾನೆ ಎಂಬುದಾಗಿ ದಿನೇಶ ಆಚಾರ್ ತಂದೆ:ಶ್ರೀಧರ ಆಚಾರ್ ವಾಸ: ಮೂಡುಮಠ 11 ನೇ ಉಳ್ಳೂರು ಗ್ರಾಮ ಕುಂದಾಪುರ ತಾಲೂಕುರವರು ನೀಡಿದ ದೂರಿನಂತೆ ಬೈಂದೂರು ಠಾಣೆಯಲ್ಲಿ ಅಪರಾಧ ಕ್ರಮಾಂಕ 157/14 ಕಲಂ :279 337 338 ಐ ಪಿ ಸಿ ಮತ್ತು ಕಲಂ 134(ಎ)(ಬಿ) ಐ ಎಮ್ ವಿ ಕಾಯಿದೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
No comments:
Post a Comment