ಮನುಷ್ಯ ಕಾಣೆ ಪ್ರಕರಣ
- ಉಡುಪಿ: ಪಿರ್ಯಾದಿದಾರರಾದ ಲಕ್ಷ್ಮೀ (19),ಗಂಡ: ಮಲ್ಲೇಶ ವಾಸ: ಕೃಷ್ಣ ಮಠದ ರಾಜಾಂಗಣದ ಹತ್ತಿರ ಶಿವಳ್ಳಿ ಗ್ರಾಮ ಉಡುಪಿ ತಾಲೂಕು ಎಂಬವರ ಗಂಡ ಮಲ್ಲೇಶ (25) ಎಂಬವರು ದಿನಾಂಕ 19/04/2014 ರಂದು ಬೆಳಗ್ಗೆ 11:00 ಗಂಟೆಗೆ ಕೆಲಸಕ್ಕೆಂದು ಹೋದವರು ಈ ತನಕ ಮನೆಗೆ ಬಂದಿರುವುದಿಲ್ಲ. ಪಿರ್ಯಾದಿದಾರರು ಅವರ ಗಂಡನೊಂದಿಗೆ ಕೆಲಸ ಮಾಡುವ ನಾಗರಾಜ ಎಂಬವರನ್ನು ವಿಚಾರಿಸಿದಾಗ ಮದ್ಯಾಹ್ನ 12:00 ಗಂಟೆಯವರೆಗೆ ಕೃಷ್ಣ ಮಠದಲ್ಲಿ ಕೆಲಸ ಮಾಡಿಕೊಂಡಿದ್ದು, ನಂತರ ಆತನು ಕೆಲಸಕ್ಕೆ ಬಂದಿಲ್ಲ ಎಂದು ತಿಳಿಸಿದ್ದು, ಪಿರ್ಯಾದಿದಾರರು ತನ್ನ ಗಂಡನ ಫೋನ್ ನಂಬ್ರ ಕರೆಮಾಡಿದಾಗ ಸ್ವಿಚ್ ಆಫ್ ಆಗಿರುತ್ತದೆ. ನಂತರ ಸುತ್ತಮುತ್ತಲಿನ ಊರುಗಳಲ್ಲಿ ಹುಡುಕಾಡಿದರು ಪತ್ತೆಯಾಗಿರುವುದಿಲ್ಲ. ಎಂಬುದಾಗಿ ಲಕ್ಷ್ಮೀ ರವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 158/14 ಕಲಂ ಮನುಷ್ಯ ಕಾಣೆ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣ
- ಗಂಗೊಳ್ಳಿ: ಮೃತ ಬಚ್ಚು ಪೂಜಾರಿತಂದೆ ದಿ. ರಾಮ ಪೂಜಾರಿ ಉಂಡಾಡಿ ಮನೆ, ಆಲೂರು, ಕುಂದಾಪುರ ತಾಲೂಕು ರವರು ಕಳೆದ 9 ತಿಂಗಳಿನಿಂದ ಗಂಟಲಿನ ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದು, ಖಾಯಿಲೆಯು ಉಲ್ಭಣವಾಗಿದ್ದು, ದಿನಾಂಕ 19/04/2014 ರಂದು ಮಧ್ಯಾಹ್ನ 14:15 ಗಂಟೆಯಿಂದ 14:40 ಗಂಟೆಯ ಮಧ್ಯ ಅವಧಿಯಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡು ಮರದ ಕೊಂಬೆಗೆ ನೈಲಾನ್ ಹಗ್ಗವನ್ನು ಕಟ್ಟಿ ಕುತ್ತಿಗೆಗೆ ನೇಣು ಬೀಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ ಎಂಬುದಾಗಿ ಸಾದು ಯಾನೆ ಬಾಬಿ ಪೂಜಾರ್ತಿ(55), ಗಂಡ: ಬಚ್ಚು ಪೂಜಾರಿ, ವಾಸ: ಉಂಡಾಡಿ ಮನೆ, ಆಲೂರು, ಕುಂದಾಪುರ ತಾಲೂಕು ರವರು ನೀಡಿದ ದೂರಿನಂತೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 07/14 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
No comments:
Post a Comment