Saturday, April 19, 2014

Daily Crime Reports as on 19/04/2014 07:00 Hrs.



ಕೊಲೆ ಪ್ರಕರಣ :  

  • ಶ್ರೀಮತಿ ಲೀಲಾ ಶೆಟ್ಟಿ (60) ತಂದೆ: ಶ್ರೀಧರ ಶೆಟ್ಟಿ ವಾಸ: ಗುಲಾಬಿ ನಿವಾಸ, ಬಾಳ್ಕಟ್ಟ, ಹಿರೇಬೆಟ್ಟು ಗ್ರಾಮ, ಉಡುಪಿ ತಾಲೂಕುಇವರ ಗಂಡ ಶ್ರೀಧರ ಶೆಟ್ಟಿ ಎಂಬವರು ಅವರ ದೂರದ ಸಂಬಂಧಿಯವರಾದ ಗುಣಕರ ಶೆಟ್ಟಿ, ಪ್ರಶಾಂತ ಶೆಟ್ಟಿ ಮತ್ತು ಅಶೋಕ ಶೆಟ್ಟಿ ಎಂಬವರು ಸ್ವರ್ಣ ನದಿಯಲ್ಲಿ ಮರಳು ತೆಗೆದು ಸಾಗಾಟ ನಡೆಸುತ್ತಿರುವುದನ್ನು ಶ್ರೀಧರ ಶೆಟ್ಟಿರವರು ಆಕ್ಷೇಪಿಸಿದ್ದು, ಇದರಿಂದ ಕುಪಿತರಾದ ಆಪಾದಿತರು ದಿನಾಂಕ 18.04.2014 ರಂದು ಬೆಳಿಗ್ಗೆ 10:45 ಗಂಟೆಯ ಮೊದಲು ಉಡುಪಿ ತಾಲೂಕು ಹೆರ್ಗಾ ಗ್ರಾಮದ ಮುರತ್ತಕಡಿ ಎಂಬಲ್ಲಿ ಶ್ರೀಧರ ಶೆಟ್ಟಿಯವರಿಗೆ ಮಾರಣಾಂತಿಕ ಹಲ್ಲೆ ನಡೆಸಿದ್ದು, ಇದರಿಂದ ಶ್ರೀಧರ ಶೆಟ್ಟಿಯವರು ಸದ್ರಿ ಸ್ಥಳದಲ್ಲಿ ಬೆಳಿಗ್ಗೆ 11:45 ಗಂಟೆಗೆ ಮೃತಪಟ್ಟಿರುತ್ತಾರೆ. ಆಪಾದಿತರು ಸಮಾನ ಉದ್ದೇಶದಿಂದ ಒಟ್ಟು ಸೇರಿ ಶ್ರೀಧರಶೆಟ್ಟಿರವರಿಗೆ ಹಲ್ಲೆ ನಡೆಸಿ ಕೊಲೆ ಮಾಡಿರುವುದಾಗಿದೆ ಎಂಬುದಾಗಿ ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ : 68/2014 ಕಲಂ. 302 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಲಲಾಗಿದೆ.

No comments: