ಕಳವು ಪ್ರಕರಣ
- ಕಾರ್ಕಳ: ಕಾರ್ಕಳ ತಾಲೂಕು ಮುಂಡ್ಕೂರು ಗ್ರಾಮದ ಅಂಗಡಿಗುತ್ತು ಬಳಿ ಮಾಲತಿ ನಿವಾಸ ಎಂಬ ಮನೆಯ ಬಾಗಿಲಿನ ಬೀಗವನ್ನು ದಿನಾಂಕ: 02.03.2014 ರಂದು ಬೆಳಿಗ್ಗೆ 11:00 ಗಂಟೆಯ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಮುರಿದು ಒಳಹೊಕ್ಕಿ ಮನೆಯೊಳಗೆ ಕಪಾಟಿನಲ್ಲಿ ಇರಿಸಿದ್ದ ಸುಮಾರು 1 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ರೂ 1,300/- ಹಾಗೂ 2 ಸೀರೆಯನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಶ್ರೀಮತಿ ಶ್ರುತಿ ಲೋಕೇಶ್ ಶೆಟ್ಟಿಗಾರ್ ಇವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 30/14 ಕಲಂ: 454, 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
- ಹಿರಿಯಡ್ಕ: ದಿನಾಂಕ 27.02.2014 ರಂದು ಸಂಜೆ 16.00 ಗಂಟೆಯಿಂದ ದಿನಾಂಕ 28.02.2014 ರ ಬೆಳಿಗ್ಗೆ 08.30 ಗಂಟೆಯ ನಡುವೆ ಉಡುಪಿ ತಾಲೂಕು ಪೆರ್ಡೂರು ಗ್ರಾಮದ ಪೆರ್ಡೂರಿನಲ್ಲಿರುವ ಹೋಟೆಲ್ ಆಶ್ಲೇಷಾದ ಕಂಪೌಂಡಿನ ಒಳಗೆ ನಿಲ್ಲಿಸಿದ್ದ ಜಯ ಪೂಜಾರಿ ಇವರ ಬಾಬ್ತು 15,000 ರೂಪಾಯಿ ಮೌಲ್ಯದ KA 20 Q 9747 ನಂಬ್ರದ ಹೀರೋ ಹೋಂಡಾ ಸ್ಪ್ಲೆಂಡರ್ ಮೋಟಾರು ಸೈಕಲನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಈ ಬಗ್ಗೆ ಜಯ ಪೂಜಾರಿ ಇವರು ನೀಡಿದ ದೂರಿನಂತೆ ಹಿರಿಯಡ್ಕ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 33/2014 ಕಲಂ 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
- ಕಾರ್ಕಳ: ದಿನಾಂಕ: 02.03. 2014 ರಂದು ರಾತ್ರಿ ಸುಮಾರು 09:30 ಗಂಟೆಗೆ ಕಾರ್ಕಳ ತಾಲೂಕು ಈದು ಗ್ರಾಮದ ಹೊಸ್ಮಾರ್ ಶಾಲೆ ಬಳಿ ರಮೇಶ್ ಎಂಬವರು ಅವರ ಬಾಬ್ತು ಮೋಟಾರ್ ಸೈಕಲ್ ನಂ. KA-19-Y-8519 ನೇಯದನ್ನು ಹೊಸ್ಮಾರ್ ಜಂಕ್ಷನ್ ಕಡೆಯಿಂದ ಈದು ಕ್ರಾಸ್ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ರಾಮಪ್ಪ ಪೂಜಾರಿ ಎಂಬುವರಿಗೆ ಢಿಕ್ಕಿ ಹೊಡೆದ ಪರಿಣಾಮ ರಾಮಪ್ಪಪೂಜಾರಿ ರವರಿಗೆ ತಲೆಗೆ ಹಾಗೂ ಕಾಲಿಗೆ ಗಂಭೀರ ಗಾಯ ಹಾಗೂ ಮೋಟಾರ್ ಸೈಕಲ್ ಸವಾರ ರಮೇಶ ಇವರಿಗೆ ತಲೆಗೆ ಗಾಯವಾಗಿರುವುದಾಗಿದೆ. ಈ ಬಗ್ಗೆ ಶ್ರೀಮತಿ ಶಾರದ ಇವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 31/14 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
No comments:
Post a Comment