Monday, March 03, 2014

Daily Crime Reported on 03/03/2014 At 07:00 Hrs



ಅಪಹರಣ ಪ್ರಕರಣ 
  • ಕಾರ್ಕಳ: ದಿನಾಂಕ 01/03/2014 ರಂದು ಬೆಳಿಗ್ಗೆ 08:00 ಗಂಟೆಗೆ ಕಾರ್ಕಳ ತಾಲೂಕಿನ ಕಸಬಾ ಗ್ರಾಮದ, ಆನೆಕೆರೆ ಎಸ್.ಎನ್.ವಿ. ಶಾಲೆಯ 9 ನೇ ತರಗತಿಯ ವಿದ್ಯಾರ್ಥಿಗಳಾದ ಕುಮಾರಿ ಸುಮ ವಿ (15), ಮತ್ತು ಕುಮಾರಿ ಹರ್ಷಿತಾ (15) ಎಂಬುವರು ಪಿರ್ಯಾದಿದಾರರಾದ ದಿವಿಜ (28) ತಂದೆ ವಿಠಲ ಸಾಲ್ಯಾನ್, ವಾಸ ಸುನೀತಾ ನಿವಾಸ, ದೂಪದಕಟ್ಟೆ, ಅಂಚೆ, ನಿಟ್ಟೆ ಗ್ರಾಮ, ಕಾರ್ಕಳ ತಾಲೂಕು ಇವರು ಶಾಲೆಯ ಫೀಸು ಕಟ್ಟಲು ಇದೆ, ಹಣ ಕೊಡುವಂತೆ ಕೇಳಿ, ಪಡೆದುಕೊಂಡು ಹೋದವರು ಶಾಲೆಗೆ ಹೋಗದೇ ಮನೆಗೆ ಬಾರದೇ ಸಂಬಂದಿಕರ ಮನೆಗಳಿಗೂ ಹೋಗದೆ ಕಾಣೆಯಾಗಿರುತ್ತಾರೆ ಅವರಿಬ್ಬರು, ಅವರಾಗಿಯೇ ಅಥವಾ ಯಾರಾದರೂ ಜೊತೆಗೆಯಲ್ಲಿ ಕರೆದು ಕೊಂಡು ಹೋಗಿರಬಹುದಾಗಿದೆ ಎಂಬುದಾಗಿ ದಿವಿಜ ಇವರು ನೀಡಿದ ದೂರಿನಂತೆ ಕಾರ್ಕಳ ನಗರ ಠಾಣಾ ಅಪರಾಧ ಕ್ರಮಾಂಕ 47/20104 ಕಲಂ 363 ಐ.ಪಿ.ಸಿನಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ. 
ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದವನ ಬಂಧನ
  • ಕಾರ್ಕಳ: ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ಉಪ ನಿರೀಕ್ಷಕ ಶ್ರೀ ರವಿ.ಎನ್.ಎನ್ ಇವರಿಗೆ ಬಂದ ಖಚಿತ ಮಾಹಿತಿಯ ಆದಾರದ ಮೇರೆಗೆ ದಿನಾಂಕ 02/03/2014ರಂದು 18:45 ಗಂಟೆಗೆ ಕಾರ್ಕಳ ತಾಲೂಕು ಕಲ್ಯಾ ಗ್ರಾಮ ನೆಲ್ಲಿಕಟ್ಟೆ ಎಂಬಲ್ಲಿ ಆರೋಪಿ ಬಾಲಕೃಷ್ಣ ಸುವರ್ಣ (44) ತಂದೆ ದಿ. ನಾತು ಸುವರ್ಣ, ವಾಸ ನೆಲ್ಲಿಕಟ್ಟೆ, ಕಲ್ಯಾ ಗ್ರಾಮ, ಕಾರ್ಕಳ ತಾಲೂಕು ಎಂಬವರು ತನ್ನ ಸ್ವಂತ ಲಾಭಕ್ಕೋಸ್ಕರ ಯಾವುದೇ ಪರವಾನಿಗೆ ಹೊಂದದೆ ಅಕ್ರಮವಾಗಿ ಮೈಸೂರು ಲ್ಯಾನ್ಸರ್‌ ವಿಸ್ಕಿಯನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದವರನ್ನು ಸಿಬ್ಬಂದಿಗಳ ಸಹಾಯದಿಂದ ದಾಳಿ ನಡೆಸಿ ಪತ್ತೆ ಹಚ್ಚಿ ಆರೋಪಿಯ ವಶದಲ್ಲಿ ಇದ್ದ ಸುಮಾರು 1600 ರೂಪಾಯಿ ಬೆಲೆ ಬಾಳುವ ಮೈಸೂರು ಲ್ಯಾನ್ಸರ್‌ ವಿಸ್ಕಿಯ ಕ್ವಾಟರ್ ಬಾಟ್ಲಿಗಳು 31 ಮತ್ತು ಮಾರಾಟ ಮಾಡಿ ಇಟ್ಟಿದ್ದ ಮದ್ಯದ ಖಾಲಿ ಬಾಟ್ಲಿಯನ್ನು ಚೀಲ ಸಮೇತ ಮುಂದಿನ ಕ್ರಮದ ಬಗ್ಗೆ ಸ್ವಾದೀನಪಡಿಸಿಕೊಂಡು ಪ್ರಕರಣದ ದಾಖಲಿಸಿರುವುದಾಗಿದೆ ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣಾ ಅಪರಾಧ ಕ್ರಮಾಂಕ 29/14 ಕಲಂ 32, 34 K.E Act ನಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.



No comments: