ಕೊಲೆ ಪ್ರಕರಣ
- ಪಡುಬಿದ್ರಿ: ದಿನಾಂಕ 01/03/2014ರಂದು ಸಂಜೆ 7:00 ಗಂಟೆಗೆ ನಂದಿಕೂರು ಗ್ರಾಮದ ನಂದಿಕೂರು ಸಂತೋಷ ಬಾರ್ ಬಳಿ ಆರೋಪಿಯಾದ ಯೋಗೀಶ್ ಎಂಬವರು ಪಿರ್ಯಾದಿದಾರರಾದ ಸುರೇಂದ್ರ ದೇವಾಡಿಗ (30) ತಂದೆ ಸೀನ ದೇವಾಡಿಗ, ವಾಸ ವೈಷ್ಣವಿ ನಿಲಯ, ರಾಮ ದೇವಾಲಯದ ಹತ್ತಿರ, ನಂದಿಕೂರು ಗ್ರಾಮ ಉಡುಪಿ ತಾಲೂಕು ಇವರ ಮಾವನಾದ ವಸಂತ ದೇವಾಡಿಗ (42)ರವರಲ್ಲಿ ಬಾರ್ ದನಿಯವರ ಕೋಳಿಯನ್ನು ಯೋಗೀಶನ ದನಿಯವರಾದ ಮೋನು ಎಂಬವರಿಗೆ ಕೊಟ್ಟ ವಿಚಾರದಲ್ಲಿ ತಕಾರಾರು ನಡೆಸಿ, ತನ್ನ ಕೈಯಿಂದ ವಸಂತ ದೇವಾಡಿಗರ ಕೆನ್ನೆಗೆ ಬಲವಾಗಿ ಹೊಡೆದು ಕೊಲೆ ಮಾಡಿರುತ್ತಾರೆ. ಎಂಬುದಾಗಿ ಸುರೇಂದ್ರ ದೇವಾಡಿಗ ಇವರು ದೂರಿನಂತೆ ಪಡುಬಿದ್ರಿ ಠಾಣಾ ಅಪರಾಧ ಕ್ರಮಾಂಕ 23/2014 ಕಲಂ 302 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.
No comments:
Post a Comment