Sunday, February 23, 2014

Daily Crime Reported on 23/02/2014 at 07:00 Hrs.

ಅಪಘಾತ ಪ್ರಕರಣ
  • ಶಂಕರನಾರಾಯಣ: ದಿನಾಂಕ: 22/01/2014 ರಂದು ಮದ್ಯಾಹ್ನ 1:00 ಗಂಟೆಯ ಸಮಯಕ್ಕೆ ಆರೋಪಿಯು ತನ್ನ KA 20 C 9137 ನೇ ನಂಬ್ರದ ಓಮ್ನಿ ಕಾರನ್ನು ಸಿದ್ದಾಪುರ ಅಂಪಾರು ಮುಖ್ಯರಸ್ತೆಯಲ್ಲಿ ಅಂಪಾರು ಕಡೆಯಿಂದ ಸಿದ್ದಾಪುರ ಕಡೆಗೆ ಕುಂದಾಪುರ ತಾಲೂಕು, ವಂಡ್ಸೆ ಹೋಬಳಿಯ ಸಿದ್ದಾಪುರ ಗ್ರಾಮದ ಜನ್ಸಾಲೆ ಎಣ್ಣೆ ಮಿಲ್‌ಹತ್ತಿರ ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗಿ,ಅಂಪಾರು ಕಡೆಯಿಂದ ಸಿದ್ದಾಪುರ ಕಡೆಗೆ ಪಿರ್ಯಾದಿ ನರಸಿಂಹ ಮೊಗವೀರ,ತಂದೆ: ಸೀನ ಮೊಗವೀರ, ವಾಸ: ದರ್ಖಾಸು ಹೌಸ್‌, ಕೊಂಡಳ್ಳಿ, ಶಂಕರನಾರಾಯಣ ಗ್ರಾಮ, ಕುಂದಾಪುರ ತಾಲೂಕುರವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ KA 20 W 6328 ನೇ ನಂಬ್ರದ TVS XL ಮೋಟಾರು ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಮೊಟಾರು ಸೈಕಲ್‌ಸಮೇತ ರಸ್ತೆಗೆ ಬಿದ್ದು ಎಡಕೈ ಮಣಿಗಂಟಿಗೆ, ಮೂಗಿಗೆ ಮತ್ತು ಕುತ್ತಿಗೆಯ ಹಿಂಬದಿಗೆ ಪೆಟ್ಟಾಗಿರುತ್ತದೆ.ಈ ಬಗ್ಗೆ ನರಸಿಂಹ ಮೊಗವೀರರವರು ನೀಡಿದ ದೂರಿನಂತೆ ಅಪರಾಧ ಕ್ರಮಾಂಕ 28 /14 ಕಲಂ:279,337  ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.
ಜುಗಾರಿ ಪ್ರಕರಣ 
  • ಕಾಪು: ಬಿ.ಲಕ್ಷ್ಮಣ ಪಿಎಸ್‌ಐ ಅಪರಾಧ ವಿಭಾಗ ಕಾಪು ಪೊಲೀಸ್ ಠಾಣೆರವರಿಗೆ ದೊರೆತ ಖಚಿತ ವರ್ತಮಾನದ ಮೇರೆಗೆ ಏಣಗುಡ್ಡೆ ಗ್ರಾಮದ ಕಟಪಾಡಿ ಬಸ್ ನಿಲ್ದಾಣದ ಹತ್ತಿರ  ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಟ ಆಡುತ್ತಿದ್ದ ಆರೋಪಿ ಅರವಿಂದ (34) ತಂದೆ: ವಾಸು ಸೇರಿಗಾರ ವಾಸ: ಅಮಿತ ನಿವಾಸ, ಕೋಟೆ ಗ್ರಾಮ ಎಂಬಾತನನ್ನು ವಶಕ್ಕೆ ಪಡೆದು, ಮಟ್ಕಾ ಜುಗಾರಿ ಆಟಕ್ಕೆ ಬಳಸಿದ ನಗದು ರೂಪಾಯಿ 1020/- ಹಾಗೂ ಇತರೆ ಪರಿಕರಗಳನ್ನು ಸ್ವಾಧೀನಪಡಿಸಿ ಠಾಣಾ ಅಪರಾಧ ಕ್ರಮಾಂಕ  29/2014 ಕಲಂ 78(3)ಕರ್ನಾಟಕ ಪೊಲೀಸ್ ಕಾಯ್ದೆಯಂತೆ  ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.

No comments: