ಅಪಘಾತ ಪ್ರಕರಣ
- ಶಂಕರನಾರಾಯಣ: ದಿನಾಂಕ: 22/01/2014 ರಂದು ಮದ್ಯಾಹ್ನ 1:00 ಗಂಟೆಯ ಸಮಯಕ್ಕೆ ಆರೋಪಿಯು ತನ್ನ KA 20 C 9137 ನೇ ನಂಬ್ರದ ಓಮ್ನಿ ಕಾರನ್ನು ಸಿದ್ದಾಪುರ – ಅಂಪಾರು ಮುಖ್ಯರಸ್ತೆಯಲ್ಲಿ ಅಂಪಾರು ಕಡೆಯಿಂದ ಸಿದ್ದಾಪುರ ಕಡೆಗೆ ಕುಂದಾಪುರ ತಾಲೂಕು, ವಂಡ್ಸೆ ಹೋಬಳಿಯ ಸಿದ್ದಾಪುರ ಗ್ರಾಮದ ಜನ್ಸಾಲೆ ಎಣ್ಣೆ ಮಿಲ್ಹತ್ತಿರ ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗಿ,ಅಂಪಾರು ಕಡೆಯಿಂದ ಸಿದ್ದಾಪುರ ಕಡೆಗೆ ಪಿರ್ಯಾದಿ ನರಸಿಂಹ ಮೊಗವೀರ,ತಂದೆ: ಸೀನ ಮೊಗವೀರ, ವಾಸ: ದರ್ಖಾಸು ಹೌಸ್, ಕೊಂಡಳ್ಳಿ, ಶಂಕರನಾರಾಯಣ ಗ್ರಾಮ, ಕುಂದಾಪುರ ತಾಲೂಕುರವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ KA 20 W 6328 ನೇ ನಂಬ್ರದ TVS XL ಮೋಟಾರು ಸೈಕಲ್ಗೆ ಡಿಕ್ಕಿ ಹೊಡೆದ ಪರಿಣಾಮ ಮೊಟಾರು ಸೈಕಲ್ಸಮೇತ ರಸ್ತೆಗೆ ಬಿದ್ದು ಎಡಕೈ ಮಣಿಗಂಟಿಗೆ, ಮೂಗಿಗೆ ಮತ್ತು ಕುತ್ತಿಗೆಯ ಹಿಂಬದಿಗೆ ಪೆಟ್ಟಾಗಿರುತ್ತದೆ.ಈ ಬಗ್ಗೆ ನರಸಿಂಹ ಮೊಗವೀರರವರು ನೀಡಿದ ದೂರಿನಂತೆ ಅಪರಾಧ ಕ್ರಮಾಂಕ 28 /14 ಕಲಂ:279,337 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.
ಜುಗಾರಿ ಪ್ರಕರಣ
- ಕಾಪು: ಬಿ.ಲಕ್ಷ್ಮಣ ಪಿಎಸ್ಐ ಅಪರಾಧ ವಿಭಾಗ ಕಾಪು ಪೊಲೀಸ್ ಠಾಣೆರವರಿಗೆ ದೊರೆತ ಖಚಿತ ವರ್ತಮಾನದ ಮೇರೆಗೆ ಏಣಗುಡ್ಡೆ ಗ್ರಾಮದ ಕಟಪಾಡಿ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಟ ಆಡುತ್ತಿದ್ದ ಆರೋಪಿ ಅರವಿಂದ (34) ತಂದೆ: ವಾಸು ಸೇರಿಗಾರ ವಾಸ: ಅಮಿತ ನಿವಾಸ, ಕೋಟೆ ಗ್ರಾಮ ಎಂಬಾತನನ್ನು ವಶಕ್ಕೆ ಪಡೆದು, ಮಟ್ಕಾ ಜುಗಾರಿ ಆಟಕ್ಕೆ ಬಳಸಿದ ನಗದು ರೂಪಾಯಿ 1020/- ಹಾಗೂ ಇತರೆ ಪರಿಕರಗಳನ್ನು ಸ್ವಾಧೀನಪಡಿಸಿ ಠಾಣಾ ಅಪರಾಧ ಕ್ರಮಾಂಕ 29/2014 ಕಲಂ 78(3)ಕರ್ನಾಟಕ ಪೊಲೀಸ್ ಕಾಯ್ದೆಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.
No comments:
Post a Comment