ಅಪಘಾತ ಪ್ರಕರಣ
- ಕಾರ್ಕಳ: ದಿನಾಂಕ 20/05/2013 ರಂದು ಶೇಖರ ತಂದೆ: ಶಿವನಂಜೇ ಗೌಡ ವಾಸ: ಬೆಳ್ಳೂರು ಹೋಬಳಿ ಕಂಚನಳ್ಳಿ ಅಂಚೆ ಜಂದಿಗೆರೆ ಗ್ರಾಮ ನಾಗಮಂಗಲ ತಾಲೂಕುರವರು ತನ್ನ ಸ್ನೇಹಿತನ ಮದುವೆಯ ಬಗ್ಗೆ ವೆಂಕಟೇಶ ಎಂಬುವವರ ಕೆ ಎ-11 ಎಂ 3485 ನೇ ಮಾರುತಿ ಓಮ್ನಿ ಕಾರಿನಲ್ಲಿ ಧರ್ಮಸ್ಥಳಕ್ಕೆ ಬಂದು ಮದುವೆ ಕಾರ್ಯಕ್ರಮ ಮುಗಿಸಿ ಕಾರ್ಕಳದ ಕಡೆಗೆ ಬರುವಾಗ ಬೆಳಿಗ್ಗೆ 9:30 ಘಂಟೆಗೆ ಕಾರ್ಕಳ ತಾಲೂಕು ನಲ್ಲೂರು ಎಂಬಲ್ಲಿ ಚಾಲಕ ಆರೊಪಿ ವೆಂಕಟೇಶ ಎಂಬುವವರು ತನ್ನ ಕಾರನ್ನು ಅತೀ ವೇಗ ಹಾಗೂ ಆಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ನಿಯಂತ್ರಣ ತಪ್ಪಿ ರಸ್ತೆಯ ಎಡಬದಿಯಲ್ಲಿರುವ ಗುಂಡಿಗೆ ಬಿದ್ದ ಪರಿಣಾಮ ಶೇಖರರವರ ಎಡ ಕೈ ಮೂಳೆ ಮುರಿತ ಮತ್ತು ಸೊಂಟಕ್ಕೆ ಗುದ್ದಿದ ಗಾಯವಾಗಿದ್ದು ಚಾಲಕ ವೆಂಕಟೇಶ ಎಂಬವವರಿಗೆ ಎಡ ಕೈ ಮೂಳೆ ಮುರಿತದ ಗಾಯವಾಗಿ ಚಿಕಿತ್ಸೆಯ ಬಗ್ಗೆ ಕಾರ್ಕಳದ ಸ್ವಂದನಾ ಆಸ್ವತ್ರೆಗೆ ಒಳರೋಗಿಯಾಗಿ ದಾಖಲಾಗಿರುವುದಾಗಿದೆ ಎಂಬುದಾಗಿ ಶೇಖರರವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಅಪರಾಧ ಕ್ರಮಾಂಕ 59/2013 ಕಲಂ 279,337,338 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
No comments:
Post a Comment