ಅಸ್ವಾಭಾವಿಕ ಮರಣ ಪ್ರಕರಣ
- ಕುಂದಾಪುರ: ಎನ್, ಗೋಪಿನಾಥ (47) ತಂದೆ: ನಂದಿ ಕುಲಾಲ್ ವಾಸ: ನಂದು ನಿಲಯ ಐತಾಳ್ ಬೆಟ್ಟು ಕೋಟೇಶ್ವರ ಗ್ರಾಮ ಕುಂದಾಪುರ ತಾಲೂಕು ಇವರ ಮಗಳು ಕುಮಾರಿ ಸುಮಲತಾ ಇವಳು ದಿನಾಂಕ 12/05/2013 ರಂದು ಮನೆಯಲ್ಲಿ ಸೌಖ್ಯವಿಲ್ಲವೆಂದು ಹೇಳಿಕೊಂಡಿದ್ದವಳನ್ನು ಕುಂದಾಪುರ ವಿನಯ ಆಸ್ಪತ್ರೆಗೆ ದಾಖಲಿಸಿದ್ದು ನಂತರ ಕೆ.ಎಂ.ಸಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದು ವಿಷ ಸೇವಿಸಿರುವುದಾಗಿ ತಿಳಿಯಿತು. ಮೃತಳು 10 ನೇ ತರಗತಿಯಲ್ಲಿ ಓದುತ್ತಿದ್ದವಳು ಕಡಿಮೆ ಅಂಕ ತೆಗೆದು ಕೊಂಡಿದ್ದು ಇದೇ ಕಾರಣದಿಂದ ಅಥವಾ ಬೇರೆ ಯಾವುದೋ ಕಾರಣದಿಂದ ವಿಷ ಸೇವಿಸಿ ಕೊಂಡಿದ್ದವಳು ಈ ದಿನ ದಿನಾಂಕ 14/05/2013 ರಂದು ಬೆಳಗ್ಗಿನ ಜಾವ 1.00 ಗಂಟೆಗೆ ಕೆ.ಎಂ.ಸಿ ಮಣಿಪಾಲ ಆಸ್ಪತ್ರೆಯಲ್ಲಿ ಮೃತ ಪಟ್ಟಿರುತ್ತಾಳೆ. ಈ ಬಗ್ಗೆ ಎನ್, ಗೋಪಿನಾಥ ಇವರು ನೀಡಿದ ದೂರಿನಂತೆ ಕುಂದಾಪುರ ಠಾಣಾ ಅಸ್ವಾಭಾವಿಕ ಮರಣ ಪ್ರಕರಣ ಕ್ರಮಾಂಕ: 28/13 ಕಲಂ: 174 ಸಿಆರ್ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ
No comments:
Post a Comment