ಹಲ್ಲೆ ಪ್ರಕರಣ
- ಬೈಂದೂರು: ದಿನಾಂಕ:28/04/2013 ರಂದು ಮಧ್ಯಾಹ್ನ ಸಮಯ ಸುಮಾರು 3:30 ಗಂಟೆಗೆ ಪಿರ್ಯಾದಿದಾರರಾದ ಮಂಜುನಾಥ ತಂದೆ: ಕರಿಯಪ್ಪ ವಾಸ: ತೊಂಡೆಮಕ್ಕಿ ಬೈಂದೂರು ಗ್ರಾಮ ಇವರು ತನ್ನ ಸ್ನೇಹಿತನಾದ ನಾಗರಾಜ ಎಂಬವರೊಂದಿಗೆ ಬೈಂದೂರು ಪೇಟೆಗೆ ನಡೆದುಕೊಂಡು ಬರುತ್ತಿರುವಾಗ್ಗೆ, ಬೈಂದೂರು ಗ್ರಾಮದ ತೊಂಡೆಮಕ್ಕಿ ಎಂಬಲ್ಲಿ ರಾಮಣ್ಣ ಎಂಬವರ ಅಂಗಡಿಯ ಸಮೀಪವಿರುವ ಮೋರಿಯ ಸಮೀಪ ತಲುಪಿದಾಗ ಆರೋಪಿ 1 ನೇ ಸುರೇಶ್ ಈತನು ಒಂದು ಪಲ್ಸರ್ ಮೋಟಾರು ಸೈಕಲಿನಲ್ಲಿ ಬಂದು ಆರೋಪಿ 2 ವೆಂಕಟೇಶ ಹಾಗೂ 3 ನೇ ಮಂಜುನಾಥ ಇವರೊಂದಿಗೆ ಸೇರಿ ಪಿರ್ಯಾದಿದಾರರನ್ನು ಹಾಗೂ ಅವರ ಸ್ನೇಹಿತ ನಾಗರಾಜನನ್ನು ಅಡ್ಡಗಟ್ಟಿ ಅವಾಚ್ಯ ಶಬ್ಧಗಳಿಂದ ಬೈದು ಆರೋಪಿ 1 ನೇಯವರು ಬೈಕಿನ ಮುಂಭಾಗದಲ್ಲಿರುವ ಕವರ್ ನಲ್ಲಿಟ್ಟಿದ್ದ ಕೈಗೆ ಹಾಕುವ ಸ್ಟೀಲ್ ನ ಪಂಚಿನಿಂದ ನಾಗರಾಜನ ಎಡಬದಿಯ ತಲೆಗೆ ಹೊಡೆದ ಪರಿಣಾಮ ನಾಗರಾಜನ ತಲೆಗೆ ರಕ್ತಗಾಯವಾಗಿದ್ದು ತಪ್ಪಿಸಲು ಹೋದ ಪಿರ್ಯಾದಿದಾರರಿಗೆ ಅವರೆಲ್ಲರೂ ಸೇರಿ ಕೈಯಿಂದ ದೂಡಿ ಹಾಕಿರುತ್ತಾರೆ ಸದ್ರಿ ಸಮಯ ಅವರೆಲ್ಲರೂ ಸೇರಿ ನಿಮ್ಮನ್ನು ಕೊಲ್ಲದೇ ಬಿಡುವುದಿಲ್ಲ ಎಂಬುದಾಗಿ ಜೀವಬೆದರಿಕೆ ಹಾಕಿರುತ್ತಾರೆ. ಈ ಬಗ್ಗೆ ಮಂಜುನಾಥ ಇವರು ನೀಡಿದ ದೂರಿನಂತೆ ಬೈಂದೂರು ಠಾಣಾ ಅಪರಾಧ ಕ್ರಮಾಂಕ 139/13 ಕಲಂ: 341 504 324 323 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
- ಉಡುಪಿ: ದಿನಾಂಕ28-04-2013ರಂದು ಶ್ರೀಕಾಂತ ಎಚ್ ತಂದೆ :ಕುಶಲ ಆಚಾರ್,ವಾಸ:ಹಿಂದಾರುಮನೆ,ಮುಂಡೂರು ಗ್ರಾಮ ಮತ್ತು ಅಂಚೆ, ಪುತ್ತೂರು ಇವರು ತನ್ನ ಬಾಬ್ತು KA 21 M 9281 ಕಾರಿನಲ್ಲಿ ತನ್ನ ಹೆಂಡತಿ ಮತ್ತು ಅತ್ತಿಗೆಯನ್ನು ಕುಳ್ಳಿರಿಸಿಕೊಂಡು ಉಡುಪಿಯಿಂದ ಕಿನ್ನಿ ಮೂಲ್ಕಿ ಕಡೆಗೆ ಚಲಾಯಿಸುತ್ತಾ ಕಿನ್ನಿಮೂಲ್ಕಿ ಜಂಕ್ಷನ್ ನ ಅಶ್ವಥ ಕಟ್ಟೆಯ ತಲುಪುವಾಗ ಹಿಂದಿನಿಂದ KA 19 F 2812 ನಂಬ್ರದ ಕೆ ಎಸ್ ಆರ್ ಟಿ ಸಿ ಬಸ್ ಚಾಲಕ ತನ್ನ ಬಾಬ್ತು ಬಸ್ಸನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಕಾರಿನ ಹಿಂಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಹಿಂಬಾಗ ಸಂಪೂರ್ಣ ನುಜ್ಜುಗುಜ್ಜಾಗಿರುತ್ತದೆ. ಈ ಬಗ್ಗೆ ಶ್ರೀಕಾಂತ ಎಚ್ ಇವರು ನೀಡಿದ ದೂರಿನಂತೆ ಉಡುಪಿ ನಗರ ಠಾಣಾ ಅಪರಾಧ ಕ್ರಮಾಂಕ 216/13 ಕಲಂ: 279 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
No comments:
Post a Comment