Monday, April 29, 2013

Daily Crime Reports As on 29/04/2013 At 07:00 Hrs


ಹಲ್ಲೆ ಪ್ರಕರಣ
  • ಬೈಂದೂರು: ದಿನಾಂಕ:28/04/2013 ರಂದು ಮಧ್ಯಾಹ್ನ ಸಮಯ ಸುಮಾರು 3:30 ಗಂಟೆಗೆ ಪಿರ್ಯಾದಿದಾರರಾದ ಮಂಜುನಾಥ ತಂದೆ: ಕರಿಯಪ್ಪ ವಾಸ: ತೊಂಡೆಮಕ್ಕಿ ಬೈಂದೂರು ಗ್ರಾಮ ಇವರು ತನ್ನ ಸ್ನೇಹಿತನಾದ ನಾಗರಾಜ ಎಂಬವರೊಂದಿಗೆ ಬೈಂದೂರು ಪೇಟೆಗೆ ನಡೆದುಕೊಂಡು ಬರುತ್ತಿರುವಾಗ್ಗೆ, ಬೈಂದೂರು ಗ್ರಾಮದ ತೊಂಡೆಮಕ್ಕಿ ಎಂಬಲ್ಲಿ ರಾಮಣ್ಣ ಎಂಬವರ ಅಂಗಡಿಯ ಸಮೀಪವಿರುವ ಮೋರಿಯ ಸಮೀಪ ತಲುಪಿದಾಗ ಆರೋಪಿ 1 ನೇ ಸುರೇಶ್ ಈತನು ಒಂದು ಪಲ್ಸರ್  ಮೋಟಾರು ಸೈಕಲಿನಲ್ಲಿ ಬಂದು  ಆರೋಪಿ 2 ವೆಂಕಟೇಶ ಹಾಗೂ 3 ನೇ ಮಂಜುನಾಥ ಇವರೊಂದಿಗೆ ಸೇರಿ ಪಿರ್ಯಾದಿದಾರರನ್ನು ಹಾಗೂ ಅವರ ಸ್ನೇಹಿತ ನಾಗರಾಜನನ್ನು ಅಡ್ಡಗಟ್ಟಿ ಅವಾಚ್ಯ ಶಬ್ಧಗಳಿಂದ ಬೈದು ಆರೋಪಿ 1 ನೇಯವರು ಬೈಕಿನ ಮುಂಭಾಗದಲ್ಲಿರುವ ಕವರ್ ನಲ್ಲಿಟ್ಟಿದ್ದ ಕೈಗೆ ಹಾಕುವ ಸ್ಟೀಲ್ ನ ಪಂಚಿನಿಂದ ನಾಗರಾಜನ ಎಡಬದಿಯ ತಲೆಗೆ ಹೊಡೆದ ಪರಿಣಾಮ ನಾಗರಾಜನ ತಲೆಗೆ ರಕ್ತಗಾಯವಾಗಿದ್ದು ತಪ್ಪಿಸಲು ಹೋದ ಪಿರ್ಯಾದಿದಾರರಿಗೆ ಅವರೆಲ್ಲರೂ ಸೇರಿ ಕೈಯಿಂದ ದೂಡಿ ಹಾಕಿರುತ್ತಾರೆ ಸದ್ರಿ ಸಮಯ ಅವರೆಲ್ಲರೂ ಸೇರಿ ನಿಮ್ಮನ್ನು ಕೊಲ್ಲದೇ ಬಿಡುವುದಿಲ್ಲ ಎಂಬುದಾಗಿ ಜೀವಬೆದರಿಕೆ ಹಾಕಿರುತ್ತಾರೆ. ಬಗ್ಗೆ ಮಂಜುನಾಥ ಇವರು ನೀಡಿದ ದೂರಿನಂತೆ ಬೈಂದೂರು ಠಾಣಾ ಅಪರಾಧ ಕ್ರಮಾಂಕ 139/13 ಕಲಂ: 341 504 324 323 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
ಅಪಘಾತ ಪ್ರಕರಣ 
  • ಉಡುಪಿ: ದಿನಾಂಕ28-04-2013ರಂದು ಶ್ರೀಕಾಂತ ಎಚ್ ತಂದೆ :ಕುಶಲ ಆಚಾರ್,ವಾಸ:ಹಿಂದಾರುಮನೆ,ಮುಂಡೂರು ಗ್ರಾಮ  ಮತ್ತು ಅಂಚೆ, ಪುತ್ತೂರು ಇವರು  ತನ್ನ ಬಾಬ್ತು KA 21 M 9281 ಕಾರಿನಲ್ಲಿ ತನ್ನ ಹೆಂಡತಿ  ಮತ್ತು ಅತ್ತಿಗೆಯನ್ನು ಕುಳ್ಳಿರಿಸಿಕೊಂಡು  ಉಡುಪಿಯಿಂದ  ಕಿನ್ನಿ ಮೂಲ್ಕಿ  ಕಡೆಗೆ ಚಲಾಯಿಸುತ್ತಾ ಕಿನ್ನಿಮೂಲ್ಕಿ  ಜಂಕ್ಷನ್ ನ ಅಶ್ವಥ ಕಟ್ಟೆಯ ತಲುಪುವಾಗ  ಹಿಂದಿನಿಂದ  KA 19 F 2812  ನಂಬ್ರದ   ಕೆ ಎಸ್ ಆರ್ ಟಿ ಸಿ  ಬಸ್ ಚಾಲಕ  ತನ್ನ ಬಾಬ್ತು  ಬಸ್ಸನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು  ಕಾರಿನ ಹಿಂಭಾಗಕ್ಕೆ  ಡಿಕ್ಕಿ ಹೊಡೆದ ಪರಿಣಾಮ  ಕಾರಿನ ಹಿಂಬಾಗ ಸಂಪೂರ್ಣ ನುಜ್ಜುಗುಜ್ಜಾಗಿರುತ್ತದೆ. ಬಗ್ಗೆ ಶ್ರೀಕಾಂತ ಎಚ್ ಇವರು ನೀಡಿದ ದೂರಿನಂತೆ ಉಡುಪಿ ನಗರ ಠಾಣಾ ಅಪರಾಧ ಕ್ರಮಾಂಕ 216/13 ಕಲಂ: 279 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: