ಕಳವು ಪ್ರಕರಣ
- ಉಡುಪಿ: ದಿನಾಂಕ 07/04/2013ರಂದು ಪಿರ್ಯಾದಿದಾರರಾದ ಮಹಮ್ಮದ್ ಹನೀಫ್ ಶೇಕ್ (60) ತಂದೆ ಎಸ್ ಎ ಖಾಲಿಕ್ ವಾಸ ಮನೆ ನಂಬ್ರ 8-1-70 ಮುನವ್ವರ್ ಕಾಂಪೌಂಡ್ ಕುಂಜಿಬೆಟ್ಟು ಶಿವಳ್ಳಿ ಗ್ರಾಮ ಉಡುಪಿ ತಾಲೂಕು ಇವರು ಹೆಂಡತಿಯೊಂದಿಗೆ ಮಧ್ಯಾಹ್ನ 12 ಗಂಟೆಗೆ ಉಡುಪಿ ಎಂ.ಜಿ.ಎಂ.ಕಾಲೇಜಿನ ಎದುರಿನ ಮುನಾವರ್ ಕಂಪೌಂಡ್ನಲ್ಲಿರುವ ಅವರ ಮನೆಗೆ ಬೀಗ ಹಾಕಿ ಉದ್ಯಾವರಕ್ಕೆ ಮದುವೆಗೆ ಹೋಗಿದ್ದು ನಂತರ ಅಲ್ಲಿಂದ ಶಿರ್ವಾದಲ್ಲಿರುವ ತಾಯಿ ಮನೆಗೆ ಹೋಗಿದ್ದು, ನಂತರ ವಾಪಾಸು ರಾತ್ರಿ 09:30ರ ಸುಮಾರಿಗೆ ಮನೆಗೆ ಬಂದು ನೋಡುವಾಗ ಮನೆಯ ಎದುರಿನ ಬಾಗಿಲು ಯಥಾಸ್ಥಿತಿಯಲ್ಲಿದ್ದು, ಒಳಗೆ ಹೋಗಿ ನೋಡುವಾಗ ಒಳಗಿನ ಬಾಗಿಲು ಮತ್ತು ಹಿಂದಿನ ಬಾಗಿಲು ತೆರೆದುಕೊಂಡಿದ್ದು ಮನೆಯೊಳಗೆ ಪರಿಶೀಲಿಸಿದಾಗ, 2 ರೂಮುಗಳ ಕಪಾಟುಗಳು ತೆರೆದಿದ್ದು ಒಳಗಿದ್ದ ಬಟ್ಟೆ ಚೆಲ್ಲಾಪಿಲ್ಲಿಯಾಗಿ ಬಿದ್ದುಕೊಂಡಿರುವುದು ಕಂಡು ಬಂತು. ಮನೆಯ ಬೆಡ್ರೂಮಿನ ಪಶ್ಚಿಮ ಬದಿಯ ಕಿಟಕಿಯ ಮರದ ರೀಪುಗಳನ್ನು ಕಿತ್ತಿರುವುದು ಕಂಡು ಬಂದಿದ್ದು, ಕಪಾಟಿನಲ್ಲಿದ್ದ 6 ಚಿನ್ನದ ಬಳೆ (ಅರೆಬಿಕ್ ಡಿಸೈನ್)-ಒಟ್ಟು ತೂಕ 90 ಗ್ರಾಂಗಳು, ಚಿನ್ನದ ನೆಕ್ಲೇಸ್ ಸುಮಾರು 60 ಗ್ರಾಂಗಳು, ಚಿನ್ನದ ಉಂಗುರ-3 ಮತ್ತು ಕಿವಿಯ ಚಿನ್ನದ ಲೋಲಾಕು-1 ಸುಮಾರು ಒಟ್ಟು ತೂಕ 20 ಗ್ರಾಂ, ಹಾಗೂ ನಗದು ಹಣ ರೂಪಾಯಿ 25,000/- ವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಕಳುವಾದ ಸೊತ್ತಿನ ಒಟ್ಟು ಮೌಲ್ಯ ರೂಪಾಯಿ 4,95,000/- ಆಗಿರುವುದಾಗಿದೆ ಎಂಬುದಾಗಿ ಮಹಮ್ಮದ್ ಹನೀಫ್ ಶೇಕ್ ಇವರು ನೀಡಿದ ದೂರಿನಂತೆ ಉಡುಪಿ ನಗರ ಠಾಣಾ ಅಪರಾಧ ಕ್ರಮಾಂಕ 187/13 ಕಲಂ 454, 457, 380 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಕೆಯಲ್ಲಿರುತ್ತದೆ.
No comments:
Post a Comment