ಅಪಘಾತ ಪ್ರಕರಣ
- ಕುಂದಾಪುರ: ದಿನಾಂಕ:07/04/2013 ರಂದು ಮಂಜುನಾಥ ಕಾಮತ್ (20), ತಂದೆ: ದಿ. ರಘುಪತಿ ಕಾಮತ್, ವಾಸ: ಮಹಾಮಾಯಿ ಕೃಪಾ, ಕುಕ್ಕಿ ಕಟ್ಟೆ, ಬೆಳ್ಳಂಪಳ್ಳಿ ಗ್ರಾಮ, ಕುಂದಾಪುರ ತಾಲೂಕು ಇವರು ಮೋಟಾರು ಸೈಕಲ್ ನಂಬ್ರ ಕೆಎ 20 ಇಸಿ 2637ನೇ ದರಲ್ಲಿ ಅವರ ಬಾಬ್ತು ಕೆಲಸದ ಬಗ್ಗೆ ಬೈಂದೂರಿನಿಂದ ಸಿದ್ದಾಪುರಕ್ಕೆ ಹೋಗುವರೇ ಹೆಮ್ಮಾಡಿಯಿಂದಾಗಿ ಸಮಯ ಸುಮಾರು ಮದ್ಯಾಹ್ನ 2:45 ಗಂಟೆಗೆ ದೇವಲ್ಕುಂದ ಗ್ರಾಮದ ಸಂಜೀವಿನಿ ಪೈಪ್ ಫಾಕ್ಟರಿ ಎದುರು ಹೋಗುತ್ತಿರುವಾಗ ಅವರ ಹಿಂಬದಿಯಿಂದ ಬಸ್ಸು ನಂಬ್ರ ಕೆಎ 19 ಸಿ 5149ನೇ ಎಸ್.ಆರ್.ಕೆ.ಟಿ. ಬಸ್ಸಿನ ಚಾಲಕನು ಬಸ್ಸನ್ನು ಅತೀ ವೇಗ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿ ಕೊಂಡು ಬೈಕನ್ನು ಓವರ್ ಟೆಕ್ ಮಾಡಿ ರಸ್ತೆಯ ತೀರಾ ಎಡಬದಿಗೆ ಚಲಾಯಿಸಿದ ಪರಿಣಾಮ ಬಸ್ಸಿನ ಎಡ ಭಾಗದ ಹಿಂಭಾಗ ಮೋಟಾರು ಸೈಕಲಿಗೆ ಹೊಡೆದಿದ್ದು ಪರಿಣಾಮ ಅವರು ಮೋಟಾರು ಸೈಕಲ್ ಸಮೇತ ಚರಂಡಿಗೆ ಬಿದ್ದರು. ಬಿದ್ದ ಪರಿಣಾಮ ಅವರಿಗೆ ಅವರ ಬಲಕೈ ಮೊಣಗಂಟು, ಬಲಕೈ ಒಳಭಾಗ, ಬಲಕಾಲಿನ ಮೊಣಗಂಟಿನ ಬಳಿ ತರಚಿದ ರಕ್ತಗಾಯವಾಗಿದ್ದು ಬಲಕೈ ಭುಜಕ್ಕೆ ಗುದ್ದಿದ ಒಳಜಖಂ ಆಗಿರುತ್ತದೆ. ಈ ಬಗ್ಗೆ ಮಂಜುನಾಥ ಕಾಮತ್ ಇವರು ನೀಡಿದ ದೂರಿನಂತೆ ಕುಂದಾಪುರ ಠಾಣಾ ಅಪರಾಧ ಕ್ರಮಾಂಕ 141/2013 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
- ಕುಂದಾಪುರ: ಸುಂದರ (33), ತಂದೆ: ಹೊನ್ನಪ್ಪ, ವಾಸ: ಮನಿಲ ಮನೆ, ಬಾರ್ಯ ಗ್ರಾಮ, ಬೆಳ್ತಂಗಡಿ ತಾಲೂಕು ದ,ಕ. ಜಿಲ್ಲೆ. ಇವರು ಎಸ್ಆರ್ ಕೆಟಿ ಬಸ್ಸಿನ ಚಾಲಕರಾಗಿದ್ದು ದಿನಾಂಕ:07/04/2013 ರಂದು ಮಂಗಳೂರಿನಿಂದ ಕೊಲ್ಲೂರಿಗೆ ಬಸ್ಸನ್ನು ಚಲಾಯಿಸಿಕೊಂಡು ಬರುತ್ತಿರುವಾಗ ಮದ್ಯಾಹ್ನ ಸಮಯ ಸುಮಾರು 2:45 ಗಂಟೆಗೆ ಜಾಡಿ ತಲುಪುವಾಗ ಅವರ ಬಸ್ಸಿಗೆ ಮೊಬೈಲ್ ಫೋನಿನಲ್ಲಿ ಮಾತನಾಡಿಕೊಂಡು ಬರುತ್ತಿದ್ದ ಕೆಎ 20 ಇಸಿ 2637ನೇ ಬೈಕಿನ ಸವಾರ ಬೈಕನ್ನು ಬಸ್ಸಿಗೆ ತಾಗಿಸಿ ಬೈಕ್ ಸಮೇತ ಕೆಳಗೆ ಬಿದ್ದಿದ್ದು ಆ ಸಮಯ ಅಲ್ಲಿ ಸೇರಿದ ಜನರಲ್ಲಿ ಇಬ್ಬರು ಬಸ್ಸನ್ನು ಅಡ್ಡಗಟ್ಟಿ ಸುಂದರ ಅವರನ್ನು ಬಸ್ಸಿನಿಂದ ಕೆಳಗಿಳಿಸಿ ಅವಾಚ್ಯ ಶಬ್ದದಿಂದ ಬೈದು ಬೈಕ್ ಸವಾರನನ್ನು ಕೊಲ್ಲುತ್ತಿಯಾ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ಬಸ್ಸಿನ ಎದುರು ಗ್ಲಾಸಿಗೆ ಕಲ್ಲು ಹೊಡೆದು ಗ್ಲಾಸು ಒಡೆದು ಹಾಕಿ ಸುಮಾರು 11 ಸಾವಿರ ನಷ್ಟ ಮಾಡಿರುತ್ತಾರೆ. ಈ ಬಗ್ಗೆ ಸುಂದರ ಇವರು ನೀಡಿದ ದೂರಿನಂತೆ ಕುಂದಾಪುರ ಠಾಣಾ ಅಪರಾಧ ಕ್ರಮಾಂಕ 142/13 ಕಲಂ: 341, 427, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
No comments:
Post a Comment